fbpx
ಸಮಾಚಾರ

ಸತ್ತು ಹೋದ ಸಮಾಧಿಗಳಿಗೆ ಮತ್ತೆ ಮರುಜೀವ ಕೊಟ್ಟ ಪುರಾತತ್ವ ಇಲಾಖೆ!

ಕೈಗೆ ಎಟುಕದ, ಒಂಟೆಗಿಂತಲು ತುಸು ಹೆಚ್ಚೆ ಎತ್ತರವಿರುವ ವಿಶಿಷ್ಟ ಶೈಲಿಯ ಕಲ್ಲಿನ ಜೋಡಣೆಗಳು, ಸಂಪೂರ್ಣ ಕೆಂಪುಗಲ್ಲಿನಲ್ಲೇ ಜೋಡಿಸಲಾದ ಪಿರಮಿಡ್ ಹೋಲುವ ಆಕೃತಿಗಳು, ಇದೇನಪ್ಪಾ ಅಂದು ಕೊಂಡ್ರಾ? ಇದು ಜೈನ ಸಮಾಧಿಗಳು!

ಸಂಪೂರ್ಣ ಕೆಂಪುಗಲ್ಲಿನಲ್ಲಿ ಕೆತ್ತಲಾದ ವಿಶಿಷ್ಟ ಜೈನ ಸಮಾಧಿಗಳು ಇವು, ಥೇಟ್ ಪಿರಮಿಡ್ ಹೋಲುವ ಈ ಆಕೃತಿಗಳು ಕಂಡು ಬರೋದು ಮೂಡಬಿದಿರೆ ಸಮೀಪದ ಬೆಟ್ಕೇರಿಯಲ್ಲಿ, ಕೋಟೆಕೆರೆ ಮೂಡುಬಿದಿರೆ ರಸ್ತೆ ಪಕ್ಕದಲ್ಲೇ ಕಾಣ ಸಿಗುವ ಜಿನ ಸಮಾಧಿಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ.

ಐವತ್ತಕ್ಕೂ ಹೆಚ್ಚು ಸಮಾಧಿಗಳ ಪೈಕಿ ಉಳಿದುಕೊಂಡದ್ದು ಮಾತ್ರ ಬೆರಳಿಕೆಯಷ್ಟು ಅನ್ನುತ್ತಾರೆ ಸ್ಥಳೀಯರು, ನಗರೀಕರಣ, ಪ್ರಾಕೃತಿಕ ವೈಪರಿತ್ಯಕ್ಕೆ ಸಿಕ್ಕಿ ನಲುಗಿ ಅಳಿವಿನಂಚಿನಲ್ಲಿದ್ದ ಸಮಾಧಿಗಳಿಗೆ ಪುರಾತತ್ವ ಇಲಾಖೆ ಮರುಜೀವ ಕೊಡಲು ಮುಂದಾಗಿದೆ.

ನೂರಾರು ವರ್ಷಗಳ ಹಳೆಯ ಈ ಸಮಾಧಿಗಳು ಜೈನ ಸಮುದಾಯ ಹಾಗೂ ಮೂಡುಬಿದಿರೆಯ ಇತಿಹಾಸವನ್ನ ಸಾರುತ್ತವೆ, ಸೂಕ್ತ ನಿರ್ವಹಣೆಯಿಲ್ಲದೆ ಕಡೆಗಣಿಸಲ್ಪಟ್ಟ ಸಮಾಧಿಗಳಿಗೆ ಇದೀಗ ಮರುಜೀವ ಬಂದಾಂತಾಗಿದ್ದು ಇತಿಹಾಸ ಪ್ರಿಯರಿಗೆ ಸಂತಸ ತಂದಿದೆ.

ವಿಶೇಷವಾಗಿ ಜೈನರು ನೆಲೆಸಿದ್ದರು ಎನ್ನಲಾದ ಮೂಡುಬಿದಿರೆ, ಹಳದಂಗಡಿ, ಪುತ್ತೂರಿನ ಸವಣೂರು ಭಾಗದಲ್ಲಿ ಕಾಣಿಸೋ ಈ ಆಕೃತಿಗಳನ್ನ ಜೈನ ಪ್ರಮುಖರ ಸಮಾಧಿ ಎಂದು ಪರಿಗಣಿಸಲಾಗಿದ್ದು ಈ ಆಕೃತಿಗಳ ಬಗ್ಗೆ ಇನ್ಜೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲವಂತೆ!

ಈ ಆಕೃತಿಗಳ ಕೆಳಗೆ ಶಾಸನಗಳನ್ನ ಹೋಲುವ ಕೆತ್ತನೆಗಳು ದೊರಕಿದ್ದು ಇವುಗಳು ಸಮಾಧಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆರೆದಿಟ್ಟಿಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು.

ಅದೇನೆ ಇರಲಿ, ಪಾಚಿ, ಹುಲ್ಲು, ನಗರೀಕರಣದ ಹಾವಳಿಯಿಂದ ಬೇಸತ್ತಿದ್ದ ಸಮಾಧಿಗಳಿಗಳನ್ನ ಗಮನಿಸಿ ಮತ್ತೆ ಮರುಜೀವ ತುಂಬಲು ಮುಂದಾಗಿರುವ ಪುರಾತತ್ವ ಇಲಾಖೆಗೆ ಸಲಾಂ ಎನ್ನುತ್ತಿದ್ದಾರೆ ಸ್ಥಳೀಯರು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top