ಇತ್ತೀಚಿಗೆ ಸಂಚಾರಿ ಪೊಲೀಸರು ದಂಡ ಪಾವತಿಗೆ 50 % ರಿಯಾಯಿತಿ ನೀಡಿ ಫೆಬ್ರವರಿ 11 ವರೆಗೂ ಅವಕಾಶ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಹಲವಾರು ಜನರು ತಮ್ಮ ವಾಹನದ ದಂಡ ಪಾವತಿಸಿ ಸರ್ಕಾರಕ್ಕೆ ಕೋಟಿ ಕೋಟಿ ಹಣ ಬಂದಿತ್ತು. ಇದೀಗ ಸವಾರರು ಇದರ ಅವಧಿಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದ್ದರು. ಹೀಗಾಗಿ ದಂಡ ವಿನಾಯಿತಿಯ ಮುಂದುವರಿಕೆಗೆ ಸಂಚಾರ ವಿಶೇಷ ಆಯುಕ್ತ ಮನವಿ ಮಾಡಿದ್ದರು.
ಇದೀಗ ಬಂದಿರುವ ಮಾಹಿತಿಯ 50% ರಿಯಾಯಿತಿಯ ಮಯವನ್ನು ವಿಸ್ತರಿಸುವುದಾಗಿ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿರಪ್ಪ ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಿಯಾಯಿತಿ ದಂಡ ಸಂಗ್ರಹವನ್ನು ಮತ್ತೆ ವಿಸ್ತರಿಸಲಾಗಿದ್ದು, ಫೆ.14 ರಿಂದ 24ರವರೆಗೂ ಕಾಲಾವಕಾಶವಿದೆ. ಈ ಕುರಿತು ಇಂದು ಅಧಿಕೃತ ಆದೇಶ ಹೊರಬರಲಿದೆ ಎಂದು ತಿಳಿಸಿದ್ದರು.
ಈ ಹಿಂದೆ ಕೇವಲ ಫೆಬ್ರವರಿ 11 ವರೆಗೂ ಮಾತ್ರ ರಿಯಾಯಿತಿದರದಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು. ಆದರೆ ಸಾರ್ವಜನಿಕರ ಮನವಿಯ ಮೇರೆಗೆ ಇದೀಗ ದಂಡ ಪಾವತಿಯ ಅವಧಿಯನ್ನು ಹೆಚ್ಚಿಸಲಾಗಿದ್ದು, ಹೀಗಾಗಿ ಯಾರ್ ಯಾರು ಇನ್ನು ಕೂಡ ದಂಡ ಪಾವತಿಸಿಲ್ಲ ಆದಷ್ಟು ಬೇಗ ದಂಡ ಪಾವತಿಸಿದರೆ ಒಳ್ಳೆಯದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
