fbpx
ಸಮಾಚಾರ

ಕೆ.ಎಲ್ ರಾಹುಲ್ ಉಪನಾಯಕ ಪಟ್ಟಕ್ಕೆ ಕುತ್ತು! ಶಾಕ್ ಕೊಟ್ಟ ಬಿಸಿಸಿಐ

ಮದುವೆಯಾದ ನಂತರ ಕೆ.ಎಲ್ ರಾಹುಲ್ ಅವರ ಬ್ಯಾಟ್ ಮಂಕಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಒಂದು ಉದಾಹರಣೆ ಎಂದರೆ ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಲ್ಲಿ ರಾಹುಲ್ ತೋರಿಸಿರುವ ಪ್ರದರ್ಶನ. ಇದೀಗ ಬಿಸಿಸಿಐ ಇವರನ್ನು ಉಪನಾಯಕ ಪಟ್ಟಿಯಿಂದ ತೆಗೆದುಹಾಕುವ ಚಿಯಾತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ನೆನ್ನೆಯ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಗೊಳಿಸಿದ ನಂತರ ಬಿಸಿಸಿಐ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಆದರೆ ಈ ಪಂದ್ಯದಲ್ಲೂ ಸಹ ಬಿಸಿಸಿಐ ರಾಹುಲ್ ಹೆಸರನ್ನು ಪ್ರಕಟಿಸಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಮತ್ತೆ ಕ್ರಿಕೆಟ್ ಪರಿಣಿತರು ಆಯ್ಕೆ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.

ಏಕೆಂದೆರೆ ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಲ್ಲಿ ಕೆ.ಎಲ್ ರಾಹುಲ್ ಆಡಿದ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 38 ರನ್ ಮಾತ್ರ ಗಳಿಸಿದರು. ಈ ನಡುವೆಯೂ ಇವರನ್ನು ಆಯ್ಕೆ ಮಾಡಿರುವುದು ಹಲವರಿಗೆ ಬೇಸರ ತಂದಿದೆ. ಆದರೆ ಬಿಸಿಸಿಐ ಇದರಲ್ಲೂ ಸಹ ಒಂದು ಬದಲಾವಣೆ ತಂದಿದ್ದು, ಇದು ರಾಹುಲ್ ಕ್ರಿಕೆಟ್ ಕೆರಿಯರ್ ಗೆ ದೊಡ್ಡ ಹೊಡೆತ ಬೀಳುವಂತ ಸಾಧ್ಯತೆ ಇದೆ.

ಏಕೆಂದರೆ ಈ ಬಾರಿ ತಂಡವನ್ನು ಪ್ರಕಟಿಸುವುದರೊಂದಿಗೆ ಮಂಡಳಿಯು ಯಾರನ್ನೂ ಉಪನಾಯಕರನ್ನಾಗಿ ಮಾಡಿಲ್ಲ. ಮೊದಲ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸುವಾಗ ರಾಹುಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಅವರ ಹೆಸರಿನ ಮುಂದೆ ಉಪನಾಯಕ ಎಂದು ಬರೆಯಲಾಗಿತ್ತು. ಆದರೆ ಇದೀಗ ಪ್ರಕಟವಾಗಿರುವ ತಂಡದಲ್ಲಿ ರಾಹುಲ್ ಹೆಸರಿನ ಮುಂದೆ ಉಪನಾಯಕ ಎಂಬ ಪದ ಮರೆಯಾಗಿದೆ. ಹೀಗಿರುವಾಗ ಒಂದು ವೇಳೆ ರಾಹುಲ್ ಅವರ ಪ್ರದರ್ಶನ ಸುಧಾರಿಸದಿದ್ದರೆ ಅವರನ್ನು ತಂಡದಿಂದ ಕೈಬಿಡುವ ಎಲ್ಲ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top