ಯಾವುದೋ ಒಂದು ಸಿನಿಮಾದಲ್ಲಿ ಯಾವುದೋ ಒಬ್ಬ ಹೀರೋ ನಟಿಸ ಬೇಕಿರುತ್ತದೆ ಆದರೆ ಕಾಲ್ ಶೀಟ್ ಡೇಟ್ ಗಳ ಸಮಸ್ಯೆಯಿಂದಾಗಿ ಇನ್ನೊಬ್ಬ ಹೀರೋ ನಟಿಸುತ್ತಾರೆ.
ಮೊದಲು ಯೋಗರಾಜ ಭಟ್ಟರು ಪುನೀತ್ ರಾಜಕುಮಾರ್ ಅವರನ್ನು ಮುಂಗಾರು ಮಳೆ ಸಿನಿಮಾದಲ್ಲಿ ನಟಿಸಲು ಅಹ್ವಾನ ನೀಡಿದರು. ಆದರೆ ಕಾರಣಾಂತರಗಳಿಂದ ಪುನೀತ್ ರಾಜಕುಮಾರ್ ಅವರು ಮುಂಗಾರು ಮಳೆ ಸಿನಿಮಾದಲ್ಲಿ ನಟಿಸಲಿಲ್ಲ. ನಂತರ ಗಣೇಶ್ ಅವರಿಗೆ ಅವಕಾಶ ಸಿಕ್ಕಿತು. ಮುಂಗಾರು ಮಳೆ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹೊಸ ದಾಖಲೆಯನ್ನೇ ಬರೆಯಿತು.
ಇದೇ ಯೋಗರಾಜ್ ಭಟ್ಟರ ಡ್ರಾಮಾ ಸಿನಿಮಾವನ್ನು ಮೊದಲು ಲೂಸ್ ಮಾದ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಲೂಸ್ ಮಾದ ಅವರು ಡ್ರಾಮಾ ಸಿನಿಮಾದಲ್ಲಿ ನಟಿಸಲಿಲ್ಲ. ನಂತರ ಯಶ್ ಅವರನ್ನು ಡ್ರಾಮಾ ಸಿನಿಮಾಕ್ಕಾಗಿ ಆಯ್ಕೆ ಮಾಡಲಾಯಿತು. ಡ್ರಾಮಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಪಡೆಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
