ಸರ್ಕಾರಿ ಭೂ ಕಬಳಿಕೆ ಪ್ರಕರಣದಲ್ಲಿ ಸಾಕ್ಷಾತ್ ಶಿವ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ ವಿರಳ ಪ್ರಕರಣ ನ್ಯಾಯಾಲಯದಲ್ಲಿ ನಡೆದಿದೆ. ಈಶ್ವರ ನ್ಯಾಯಾಲಯಕ್ಕೆ ಬರುವುದೆಂದರೆ ಏನು? ಇದು ಯಾವ ಸಿನಿಮಾ ಕಥೆಯೂ ಅಲ್ಲ ನಡೆದ ಸತ್ಯ ಘಟನೆ .
ರಾಯಗಢದ ನಿವಾಸಿಯೊಬ್ಬರು ಸರ್ಕಾರಿ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಭೂಮಿ ಅತಿಕ್ರಮಿಸುವುದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು ತಹಸಿಲ್ ನ್ಯಾಯಾಲಯವು ಶಿವ ದೇವಾಲಯ ಸೇರಿದಂತೆ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ದೇವಸ್ಥಾನದ ಅರ್ಚಕ ಅಥವಾ ಆಡಳಿತಾಧಿಕಾರಿಗೆ ಸಮನ್ಸ್ ನೀಡದೆ ದೇವಸ್ಥಾನವನ್ನೇ ಉಲ್ಲೇಖಿಸಿದ್ದು, ಹಾಜರಾಗದಿದ್ದಲ್ಲಿ 10,000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆದ್ದರಿಂದ, ನೋಟಿಸ್ನಂತೆ ಮಹಾಶಿವ ನಿನ್ನೆ ರಾಯಗಢ ತಾಲೂಕು ಕೋರ್ಟ್ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಶಿವನ ಪ್ರತಿರೂಪ ಶಿವಲಿಂಗ ನ್ಯಾಯಾಲಯದ ವಿಚಾರಣೆ ಎದುರಿಸಿದ್ದು ಇದೊಂದು ರೀತಿಯಲ್ಲಿ ವಿನೂತನ ಅಪರೂಪದ ಪ್ರಕರಣವಾಗಿದೆ.
ಸ್ಥಳೀಯರು ಶಿವನನ್ನು ತಹಸಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾಗಿದ್ದಾರೆ. ಅಂತೆಯೇ ಶಿವಲಿಂಗವನ್ನೇ ತೆಗೆದುಕೊಂಡು ಹೋಗಿದ್ದಾರೆ. ಶಿವಲಿಂಗವನ್ನು ಕೋರ್ಟ್ ಗೆ ತಂದಾಗ ಹೆಚ್ಚಿನ ಸಂಖ್ಯೆಯ ಭಕ್ತರು ಕೂಡ ಬಂದಿದ್ದಾರೆ. ಜಾರಿ ಮಾಡಲಾಗಿದ್ದ ನೋಟಿಸ್ ನಲ್ಲಿದ್ದ ತಪ್ಪಿನಿಂದ ಹೀಗೆ ಮಾಡಲಾಗಿದೆ.
ನೋಟಿಸ್ ತಪ್ಪಾಗಿ ದೇವಾಲಯದಲ್ಲಿದ್ದ ದೇವರನ್ನು ಕರೆಯಲಾಗಿದೆ. ಈಗ ವ್ಯಕ್ತಿಯ ಹೆಸರಿನಲ್ಲಿ ಹೊಸದಾಗಿ ಸಮನ್ಸ್ ಕಳುಹಿಸಲಾಗುವುದು. ನ್ಯಾಯಾಲಯದ ಅಧಿಕಾರಿಗಳು ಸಮನ್ಸ್ ಅನ್ನು ಪರಿಶೀಲಿಸಿದ್ದು, ಅದರಲ್ಲಿ ದೋಷವಿರುವುದನ್ನು ಬಹಿರಂಗಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
