ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಎಂಬ ವಿಚಾರ ನಮಗೆಲ್ಲ ಗೊತ್ತು. ಇದೀಗ ಕಾಂತರಾದ ಹವಾ ವಿಶ್ವಸಂಸ್ತೆವರೆಗೂ ಹರಡಿದೆ ಎಂದು ಹೇಳಿದರೆ ನೀವು ನಂಬುವುದಿಲ್ಲ. ಆದರೆ ಇದು ಸತ್ಯ.
ಕಳೆದ ಕೆಲವು ದಿನಗಳಿಂದ ಜಾಗತಿಕ ಸಮಸ್ಯೆಯ ಕುರಿತು ವಿಶ್ವಸಂಸ್ಥೆ ವಾರ್ಷಿಕ ಸಭೆಯಲ್ಲಿ ಚರ್ಚೆಗಳು ನಡೆಯುತ್ತಿದೆ. ವಿಶ್ವದ ಹಲವು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಕಾಡಿನ ಜನರು ಮತ್ತು ಅವರ ಸಂಸ್ಕೃತಿಯ ಕುರಿತು ರಿಷಬ್ ಶೆಟ್ಟಿ ಬಹಳ ಚೆನ್ನಾಗಿ ತೋರಿಸಿದ್ದರು. ಇದೀಗ ಇವರು ವಿಶ್ವಸಂಸ್ಥೆಯಲ್ಲಿ ಕಾಡಂಚಿನ ಜನರ ಸಮಸ್ಯೆಯ ಕುರಿತು ಮಾತನಾಡಲಿದ್ದಾರಂತೆ. ಮತ್ತೊಂದು ವಿಶೇಷ ಎಂದರೆ ಇವರು ವಿಶ್ವಸಂಸ್ಥೆಯಲ್ಲಿ ಕನ್ನಡಲ್ಲಿ ಮಾತನಾಡಲಿದ್ದಾರೆ.
ಇದಕ್ಕೂ ಮೊದಲು ಮಾರ್ಚ್ 17 ರಂದು ವಿಶ್ವಸಂತೆಯಲ್ಲಿ ಕಾಂತಾರ ಸಿನಿಮಾದ ಪ್ರದರ್ಶನವಾಗಲಿದೆ. ಇದಾದ ಬಳಿಕ ರಿಷಬ್ ಶೆಟ್ಟಿ ಮಾತನಾಡಲಿದ್ದಾರೆ. ಬಳಿಕ ಅತಿಥಿಗಳ ಜೊತೆ ಔತಣಕೂಟದಲ್ಲಿ ಸಹ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
