ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಎಷ್ಟರಮಟ್ಟಿಗೆ ಸದ್ದು ಮಾಡಿದೆ ಎಂಬ ವಿಚಾರ ನಮಗೆಲ್ಲ ಗೊತ್ತು. ಕಾಂತಾರ ಸಿನಿಮಾ ಬಿಡುಗಡೆಯಾಗಿ ಹಲವು ತಿಂಗಳುಗಳು ಕಳೆದರು ಸಹ ಕಾಂತಾರ ಸಿನಿಮಾದ ಹವಾ ಮಾತ್ರ ಕಮ್ಮಿಯಾಗಿಲ್ಲ. ಇದೀಗ ವಿಶ್ವಸಂಸ್ಥೆಯಲ್ಲೂ ಸಹ ಕಾಂತಾರ ಸಿನಿಮಾದ ಪ್ರದರ್ಶನ ಕಂಡಿದ್ದು, ಇದು ಕನ್ನಡಿಗರು ಮತ್ತು ಕಾಂತಾರ ಸಿನಿಮಾಕ್ಕೆ ಸಿಕ್ಕ ಗೆಲುವು ಎಂದು ಹೇಳಬಹುದು.
ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕನ್ನಡದ ಸೂಪರ್ ಹಿಟ್ ಚಲನಚಿತ್ರ ‘ಕಾಂತಾರ’ ಮಾರ್ಚ್ 17ರ ಶುಕ್ರವಾರ ವಿಶ್ವಸಂಸ್ಥೆ ಸಭೆಯ ನಿಮಿತ್ತ ಪ್ರದರ್ಶನಗೊಳ್ಳಲಿದೆ. ಸ್ವಿಜರ್ಲೆಂಡ್ನ ಜಿನೇವಾದಲ್ಲಿ ವಿಶ್ವಸಂಸ್ಥೆ ಜಾಗತಿಕ ಸಭೆ ಹಮ್ಮಿಕೊಂಡಿದ್ದು, ಈ ನಿಮಿತ್ತ ಪಾಥೆ ಬಾಲೆಕ್ಸೆರ್ಟ್ ಚಿತ್ರಮಂದಿರದ 13 ನೇ ಹಾಲ್ನಲ್ಲಿ ಪ್ರದರ್ಶನ ಏರ್ಪಾಡಿಸಲಾಗಿದೆ.
ಅಲ್ಲದೇ ಈ ವೇಳೆ ಪರಿಸರ, ಹವಾಮಾನ ಹಾಗೂ ಸಂರಕ್ಷಣೆಯಲ್ಲಿ ಭಾರತೀಯ ಚಿತ್ರರಂಗದ ಪಾತ್ರದ ಕುರಿತು ರಿಷಬ್ ಚರ್ಚಿಸಲಿದ್ದಾರೆ ಎಂದು ‘ದ ಸೆಂಟರ್ ಆಫ್ ಗ್ಲೋಬಲ್ ಅಫೇರ್ಸ ಆ್ಯಂಡ್ ಪಬ್ಲಿಕ್ ಪಾಲಿಸಿ’ ಟ್ವೀಟರ್ನಲ್ಲಿ ಈ ಮಾಹಿತಿ ಹಂಚಿಕೊಂಡಿದೆ.
ಇದಲ್ಲದೆ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಪರಿಸರದ ಕುರಿತು ಕನ್ನಡದಲ್ಲಿ ಭಾಷಣ ಕೂಡ ಮಾಡಿದ್ದು ” ಪರಿಸರದ ಸುಸ್ಥಿರತೆಯನ್ನು ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟನಾಗಿ, ನಿರ್ದೇಶಕನಾಗಿ ಈ ಕುರಿತಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ. ಪರಿಸರ ಪ್ರಜ್ಞೆಗೆ ಸಿನಿಮಾ ಮಾಧ್ಯಮ ಕನ್ನಡಿ ಹಿಡಿಯುತ್ತದೆ. ಪರಿಸರ ಕುರಿತಾದ ಸಿನಿಮಾಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ”. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡಲ್ಲಿ ಮಾತನಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
