fbpx
ಸಮಾಚಾರ

‘ಪ್ರಭುದೇವ ಮಾತನಾಡಿದ್ದು ತಮಿಳು ಮಿಶ್ರಿತ ಕನ್ನಡ ಅಲ್ಲ ಚಾಮರಾಜನಗರ ಭಾಷೆ’! ಪ್ರಭುದೇವ್ ಮಾತನಾಡಿದ ಭಾಷೆ ಕುರಿತು ಸ್ಪಷ್ಟನೆ ನೀಡಿದ ವ್ಯಕ್ತಿ

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಕಳೆದಿದೆ. ಮೊದಲ ವಾರ ಕನ್ನಡಿಗರಾದ ರಮ್ಯಾ ಅವರು ಬಂದಿದ್ದರು. ಆದರೆ ರಮ್ಯಾ ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದರು. ಇದು ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿತ್ತು. ಹೀಗಾಗಿ ಈ ವಾರ ಪ್ರಭುದೇವ್ ಬರುತ್ತಿದ್ದು, ಇವರು ಸಹ ಇಂಗ್ಲಿಷ್ ಅಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ ಎಂದು ಜನರು ಅಂದುಕೊಂಡಿದ್ದರು.

ಆದರೆ ಅಲ್ಲಿ ನಡೆದಿದ್ದೇ ಬೇರೆ. ಪ್ರಭುದೇವ್ ಅವರು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ವಾವ್! ನೀವು ಕಣ್ರೀ ನಮ್ಮ ಅಪ್ಪಟ್ಟ ಕನ್ನಡಿಗ ನಮ್ಮ ನೆಚ್ಚಿನ ಡ್ಯಾನ್ಸ್‌ ಮಾಸ್ಟರ್‌ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈ ವಿಚಾರದಲ್ಲೂ ಸಹ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಪ್ರಭುದೇವ್ ಅವರು ಒತ್ತಾಯಕ್ಕೆ ಕನ್ನಡ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿರುವ ಸತ್ಯಂಶ ಬೇರೆ ಇದೆ.

ಈ ಕುರಿತು ಜನರಿಗೆ ಅರ್ಥ ಮಾಡಿಸಲು ಕುಸುಮಾ ಆಯರಹಳ್ಳಿ ಎಂಬುವವರು “ಪ್ರಭುದೇವ್‌ ಅವರಿಗೆ ಅಪ್ಪಟ್ಟ ಕನ್ನಡ ಬರುತ್ತದೆ. ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು ತಮಿಳು ವಿಶ್ರಿತ ಕನ್ನಡ ಅಲ್ಲ ಚಾಮರಾಜನಗರದ ಸೊಗಡಿನ ಭಾಷೆ. ಅಲ್ಲಿನ ಜನರು ಮದುವೆಗೆ ಮದವ ರವೆ ಉಂಡೆಗೆ ರವವುಂಡ, ತಿನ್ನದು, ಯೋಳಿ, ಮಡಗ್ಬಟ್ಟು, ಆರಾಕು ಮತ್ತು ಉದ್ನಪ್ಪಳ ಸಂಡಗ ಎಂದು ಮಾತನಾಡುತ್ತಾರೆ. ಚಾಮರಾಜನಗರ ತಮಿಳು ನಾಡಿಗೆ ಅಂಟಿಕೊಂಡಿರುವುದಕ್ಕೆ ಬಹುಷ ಅವರು ಭಾಷೆ ಮೇಲೆ ಈ ರೀತಿ ಪ್ರಭಾವ ಇರಬಹುದು. ಕೆಲವರಿಗೆ ಈ ಭಾಷೆ ಅರ್ಥವಾಗದೆ ಕಾಡು ಭಾಷೆ ಎಂದಿದ್ದಾರೆ. ನೀವು ತಿಳಿದುಕೊಂಡಿರುವುದು ಸರಿಯೇ ಏಕೆಂದರೆ ಇದು ಕಾಡಿನ ಜಿಲ್ಲೆಯಲ್ಲಿರುವ ಕಾರಣ ಕಾಡುಭಾಷೆಯೇ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ‘ತತ್ತಯ್ಯ ಒಂದ್ ದ್ವಾಸ್ಯಾ’ ಅಂತಿದ್ದರು. ದ್ವಾಸ್ಯಾ ನಾ ಎಂದು ಅನೇಕರು ಕೇಳಿದಾಗ ನಮ್ಮೂರ್ ಭಾಷೆ ಸರ್ ಎಂದು ಹೆಮ್ಮೆಯಿಂದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದರಂತೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹೀಗಾಗಿ ಪ್ರಭುದೇವ್ ಅವರು ಕಾರ್ಯಕ್ರಮದಲ್ಲಿ ಯಾವುದೇ ತೆಲುಗು ಮಿಶ್ರಿತ ಕನ್ನಡವಾಗಲಿ, ಅಥವಾ ಒತ್ತಾಯಕ್ಕೆ ಕನ್ನಡ ಮಾತನಾಡಿಲ್ಲ. ಇವರು ಮಾತನಾಡಿದ್ದು ಅಪ್ಪಟ ಚಾಮರಾಜನಗರದ ಕನ್ನಡ ಭಾಷೆ ಎಂಬುದು ಜನರಿಗೆ ತಿಳಿದಿದ್ದು, ರಮ್ಯಾ ಅವರಿಗಿಂತ ನೀವೇ ಬೆಟರ್ ಎಂದು ಜನರು ಹೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top