ಇತ್ತೀಚಿಗೆ ಜನರು ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಜನರು ಸಾಲು ಗಟ್ಟಲೆ ಕ್ಯೂ ನಿಂತಿರುವುದನ್ನು ನಾವು ಗಮನಿಸಿದ್ದೇವೆ. ಇದೀಗ ಜನಸಾಮಾನ್ಯರಿಗೆ ಮತ್ತೊಂದು ತಲೆನೋವು ಎದುರಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಇನ್ನುಂದೆ ಆಧಾರ್ ಅಪ್ಡೇಟ್ ಮಾಡಿಸವುದು ಸುಲಭದ ಮಾತಲ್ಲ. ಯುಐಡಿಎಐ ನೀಡಿರುವ ಮಾಹಿತಿ ಪ್ರಕಾರ, ಹೆಸರು ಹಾಗೂ ಹುಟ್ಟಿದ ದಿನಾಂಕ ಬದಲಾವಣೆ ಮಾಡಿಸೋದು ಕಷ್ಟ ಅಂತೆ. ಯಾಕೆಂದರೆ ಇದೀಗ ಆಧಾರ್ ದುರ್ಬಳಕೆ ಮಾಡುವುದನ್ನು ತಡೆಯಲು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಆಧಾರ್ ಅಪ್ಡೇಟ್ ಮಾಡಲು ಬೇಕಿರುವ ದಾಖಲೆಗಳ ಕುರಿತು ಯುಐಡಿಎಐ ಜನವರಿ 25ರಂದೇ ಹೊಸ ಆದೇಶ ನೀಡಿತ್ತು. ಆದರೆ ಇಲ್ಲಿಯವರೆಗೂ ಆಧಾರ್ ಸಾಫ್ಟ್ವೇರ್ ಅಪ್ಡೇಟ್ ಆಗಿರಲಿಲ್ಲ. ಆದರೆ ಇದೀಗ ಈ ಸಾಫ್ಟ್ವೇರ್ ಅಪ್ಡೇಟ್ ಆಗಿದ್ದು, ಈ ಹೊಸ ನಿಯಮ ಏಪ್ರಿಲ್ 1 ರಿಂದ ಅನ್ವಯವಾಗುತ್ತದೆ. ಹೀಗಾಗಿ ಇದು ಜನಸಾಮಾನ್ಯರಿಗೆ ಒಂದು ದೊಡ್ಡ ತಲೆನೋವಾಗಿದೆ.
ಒಂದು ವೇಳೆ ನೀವು ನಿಮ್ಮ ಜನುಮ ದಿನಾಂಕವನ್ನು ಬದಲಾಯಿಸಬೇಕಾದರೆ ನಿಮ್ಮ ಬಳಿ ಪಾಸ್ಪೋರ್ಟ್, ಸರ್ಕಾರಿ ನೌಕರರ ದಾಖಲೆ, ಪಿಂಚಣಿ ಕುರಿತಾದ ದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರ, ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣ ಪತ್ರ ಹಾಗೂ ಜನನ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರು ಒಂದು ಇದ್ದರೆ ಅಪ್ಡೇಟ್ ಮಾಡಿಸಬಹುದು. ಇಲ್ಲವಾದರೆ ಜನುಮ ದಿನಾಂಕವನ್ನು ಅಪ್ಡೇಟ್ ಮಾಡಲು ಸಾಧ್ಯವಾಗುವುದಿಲ್ಲ.
ಇದೀಗ ಇದರ ಕುರಿತು ಜನಸಾಮಾನ್ಯರಿಗೆ ಏನಾದರು ಗೊಂದಲವಿದ್ದರೆ ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ 24×7 IVRS ಸೇವೆಗಳನ್ನು ಪಡೆಯಬಹುದು ಎಂದು UIDAI ಮಾಹಿತಿ ನೀಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
