ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವ ವಿಷಯ ನಮ್ಗೆಲ್ಲಾ ಗೊತ್ತು. ಈ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ಪಾನ್ ಇಂಡಿಯಾ ಸ್ಟಾರ್ ಆದರು. ಇಷ್ಟೇಅಲ್ಲದೆ ವಿಶ್ವಸಂಸ್ಥೆಯಲ್ಲೂ ಸಹ ಕಾಂತಾರ ಸಿನಿಮಾ ಪ್ರದರ್ಶನಗೊಂಡಿತ್ತು. ಇದೀಗ ಕಾಂತಾರ ಸಿನಿಮಾದ ಹಾಡುಗಳು ಮತ್ತೆ ಸದ್ದು ಮಾಡುತ್ತಿದೆ.
ಕಾಂತಾರ ಸಿನಿಮಾದಲ್ಲಿ ಹೆಚ್ಚಾಗಿ ಹಾಡುಗಳು ಇರಲಿಲ್ಲ. ಜನರು ಸಿನಿಮಾದ ಮೇಕಿಂಗ್ ಮತ್ತು ಕ್ಲೈಮಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರ ನಟನೆಗೆ ಮನಸೋತಿದ್ದರು. ಆದರೆ ಸಿನಿಮಾ ಗೆದ್ದ ಬಳಿಕ ಇದೀಗ ಸಿನಿಮಾದ ಹಾಡುಗಳು ಸಹ ಗೆದ್ದಿದ್ದು, ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಳಿಸಿ ಧಾಖಲೆ ಮಾಡಿದೆ.
ಗಾಯಕ ವಿಜಯ್ ಪ್ರಕಾಶ್ ಸಿಂಗಾರ ಸಿರಿಯೇ 100 ಮಿಲಿಯನ್ ವ್ಯೂವ್ಸ್ ದಾಟಿದೆ ಎಂದು ಬರೆದುಕೊಂಡಿದ್ದರು. ಇದೀಗ ಚಿತ್ರದ ನಾಯಕಿ ಸಪ್ತಮಿ ಗೌಡ ಕೂಡಾ ಇದಕ್ಕೆ ಪ್ರತಿಕ್ರಿಯಿಸಿ ಎರಡೂ ಹಾಡುಗಳು 100 ಮಿಲಿಯನ್ ವೀಕ್ಷಣೆ ದಾಟಿದ್ದು, ಅಭಿಮಾನಿಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ. ಸಿಂಗಾರ ಸಿರಿಯೇ… ಹಾಗೂ ವರಾಹ ರೂಪಂ.. ಎರಡೂ ಹಾಡುಗಳು 100 ಮಿಲಿಯನ್ ಗಡಿ ಗಾಟಿವೆ. ನಿಜಕ್ಕೂ ಇದನ್ನೂ ಕನಸಿನಲ್ಲೂ ಊಹಿಸಿರಲಿಲ್ಲ. ಈ ಹಾಡುಗಳ ಬಗ್ಗೆ ನೀವು ತೋರಿದ ಪ್ರೀತಿಗೆ ಬಹಳ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ತಮ್ಮ ಟ್ವೀಟನ್ನು ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಸ್ಮ್ಹಾಗೂ ವಿಜಯ್ ಕಿರಗಂದೂರು ಅವರಿಗೆ ಟ್ಯಾಗ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
