ಉದ್ಘಾಟನೆಗೊಂಡ ದಿನದಿಂದಲೂ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಕಳಪೆ ಕಾಮಗಾರಿ, ಅವೈಜ್ಞಾನಿಕ ಕಾಮಗಾರಿ ಅಪೂರ್ಣ ರಸ್ತೆ ಹಾಗೂ ದುಬಾರಿ ಟೋಲ್ ಸಂಗ್ರಹದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆ ನಡೆಯುತ್ತಲೇ ಇದೆ.
ಇದೀಗ ರಸ್ತೆಯಲ್ಲಿ ಈ #VIP ಸರ್ವಿಸ್ ಬರಿ ಉಳ್ಳವರಿಗೋ ಅಥವಾ ಸಾಮಾನ್ಯ ಮಂಡ್ಯ ರೈತರಿಗೂ ಸಿಗುತ್ತದೋ ! ಎಂದು ರಾಜ್ಯ ಸಭಾ ಸಂಸದ ಜಿಸೀ ಚಂದ್ರಶೇಖರ್ ಪ್ರಶ್ನಿಸಿದ್ದಾರೆ. ಹಾಗಾದ್ರೆ ಸಂಸದರು ಹೇಳಿರುವ ಆ ವಿಶೇಷ vip ಸರ್ವಿಸ್ ಯಾವುದು ಅಂತೀರಾ? ಮುಂದೆ ಓದಿ
ಉದ್ಯಮಿ ಮೋಹನ್ ದಾಸ್ ಪೈ ಅವರು ಇತ್ತೀಚಿಗೆ ಸಂಚಾರದ ವೇಳೆ ತಾವು ಬೆಂಗಳೂರು ಮೈಸೂರು ದಶಪತ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾದ ಕಾರಣ ಸಿಲುಕಿಕೊಂಡಿರುವ ಬಗ್ಗೆ ಪೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಕೂಡ ಆಗಿತ್ತು. ಮೋಹನದಾಸ್ ಅವರ ಈ ಟ್ವೀಟ್ ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ರೆಸ್ಪಂಡ್ ಮಾಡಿದ್ದಾರೆ.
ಸರ್ ಈಗ ತಾನೆ ನಿಮಗೆ ಕರೆ ಮಾಡಿದ್ದೇನೆ ಆದಗ್ಯೂ ಮುಖ್ಯ ಸಂಚಾರಿ ಮಾರ್ಗದ ಬಳಿ ತಕ್ಷಣವೇ ಪೊಲೀಸರನ್ನು ನೇಮಿಸುವಂತೆ ಎಸ್ ಪಿ ಯತೀಶ್ ಅವರಿಗೆ ತಿಳಿಸಿದ್ದೇನೆ. ಅಡೆಚಣೆಗಾಗಿ ವಿಷಾದಿಸುತ್ತೇವೆ, ದಶಪಥ ರಸ್ತೆಯ ಮುಖ್ಯ ಸಂಚಾರಿ ಮಾರ್ಗ ಏಪ್ರಿಲ್ 12ರಿಂದ ಸಂಪೂರ್ಣವಾಗಿ ಆರಂಭಗೊಳ್ಳಲಿದೆ” ಎಂದು ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..
ಈಗ ಜನಸಾಮಾನ್ಯರ ಪ್ರಶ್ನೆ ಏನೆಂದರೆ ವಿಐಪಿ ಒಬ್ಬರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದಕ್ಕೆ ತಕ್ಷಣವೇ ರೆಸ್ಪೋನ್ಡ್ ಮಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಇದೇ ರೀತಿ ಜನಸಾಮಾನ್ಯರು ಸಿಲುಕಿ ಕೊಂಡಾಗ ಇಷ್ಟೇ ಬೇಗನೆ ಪ್ರತಿಕ್ರಿಸುವರೆ? ಅಥವಾ ಇ ವಿಐಪಿ ಸೇವೆ ಕೇವಲ ವಿಐಪಿ ಗಳಿಗೆ ಮಾತ್ರವೇ? ಎಂಬುದಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
