fbpx
ಸಮಾಚಾರ

ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಎರಡು ಅಚ್ಚರಿಯ ಹೆಸರುಗಳು

ಬಹು ಕುತೂಹಲ ಕೆರಳಿಸಿರುವಂತಹ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಲ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಅಧಿಕಾರದ ಗುದ್ದಿಗೆ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿವೆ.. ಅದರಲ್ಲಿ ಕಾಂಗ್ರೆಸ್ ಪಕ್ಷ ಸಹ ಹಲವಾರು ತಂತ್ರಗಳನ್ನು ರೂಪಿಸುತ್ತಿದೆ.

ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು 40 ಜನರ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹಾಗೂ ಹಾಲಿ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಪಕ್ಷದ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಎರಡು ಹೆಸರುಗಳು ಎಲ್ಲರನ್ನು ಅಚ್ಚರಿ ಮೂಡಿಸಿದೆ ಆ ಎರಡು ಹೆಸರುಗಳು ಯಾವುದೆಂದರೆ ಚಿತ್ರನಟಿ ರಮ್ಯಾ ಮತ್ತು ರಾಜ್ಯಸಭಾ ಸಂಸದರಾದ ಜಿಸಿ ಚಂದ್ರಶೇಖರ್. ನಟಿ ರಮ್ಯಾ ಅವರು ಕಳೆದ ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು ಅಷ್ಟೇ ಅಲ್ಲದೆ ಯುವ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ನೇರ ಟೀಕೆ ಮಾಡಿದ್ದರು ಇದೀಗ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರ ಹೆಸರು ಇರುವುದು ಅಚ್ಚರಿ ಮೂಡಿಸಿದೆ.

ಹಾಗೆಯೇ ಸದಾ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಪರವಾಗಿ ಸಂಸತ್ತಿನ ಒಳಗು ಮತ್ತು ಹೊರಗು ಧ್ವನಿ ಎತ್ತುವ ಸ್ವತಃ ಅತೀವ ಕನ್ನಡಾಭಿಮಾನವನ್ನು ಹೊಂದಿರುವ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಅವರು ಈ ಬಾರಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಿಂದಿ ಏರಿಕೆ ಸೇರಿದಂತೆ ಇನ್ನೂ ಅನೇಕ ವಿಚಾರಗಳಲ್ಲಿ ಕನ್ನಡಿಗರ ಕೋಪಕ್ಕೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಕನ್ನಡ ಅಭಿಮಾನಿಯೊಬ್ಬರಿಗೆ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಕೊಟ್ಟಿರುವುದು ಕೂಡ ಸ್ವಾಗತಾರ್ಹ ನಡೆಯಾಗಿದೆ.

ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ ಈ ರೀತಿ ಇದೆ:
ಮಲ್ಲಿಕಾರ್ಜುನ ಖರ್ಗೆ,
ಸೋನಿಯಾ ಗಾಂಧಿ,
ರಾಹುಲ್ ಗಾಂಧಿ,
ಪ್ರಿಯಾಂಕಾ ವಾದ್ರಾ.
ಸಿದ್ದರಾಮಯ್ಯ,
ಡಿ.ಕೆ.ಶಿವಕುಮಾರ್,
ವೇಣುಗೋಪಾಲ್ ,
ರಣದೀಪ್ ಸಿಂಗ್ ಸುರ್ಜೆವಾಲಾ, ಬಿ.ಕೆ.ಹರಿಪ್ರಸಾದ್,
ಎಂಬಿ ಪಾಟೀಲ್,
ಡಾ.ಜಿ.ಪರಮೇಶ್ವರ,
ಕೆ.ಎಚ್.ಮುನಿಯಪ್ಪ,
ಜೈರಾಮ್ ರಮೇಶ್,
ಡಾ.ಎಂ.ವೀರಪ್ಪ ಮೊಯ್ಲಿ,
ರಾಮಲಿಂಗಾ ರೆಡ್ಡಿ,
ಸತೀಶ್ ಜಾರಕಿಹೊಳಿ,
ಜಗದೀಶ್ ಶೆಟ್ಟರ್,
ಡಿ.ಕೆ.ಸುರೇಶ್,
ಜಿ.ಸಿ.ಚಂದ್ರಶೇಖರ್,
ಸಯೀದ್ ನಾಸೀರ್ ಹುಸೇನ್,
ಜಮೀರ್ ಅಹ್ಮದ್ ಖಾನ್,
ಎಚ್.ಎಂ.ರೇವಣ್ಣ,
ಉಮಾಶ್ರೀ,
ಅಶೋಕ್ ಗೆಹಲೋಟ್,
ಭೂಪೇಶ್ ಭಗೇಲ್,
ಸುಖ್ವಿಂದರ್ ಸಿಂಗ್ ಸುಕ್ಕು,
ಪಿ. ಚಿದಂಬರಂ,
ಪೃಥ್ವಿರಾಜ್ ಚೌಹಾನ್,
ಅಶೋಕ್ ಚೌಹಾನ್,
ಶಶಿ ತರೂರ್,
ರೇವಂತ್ ರೆಡ್ಡಿ,
ರಮೇಶ್ ಚೆನ್ನತ್ತಿಲ,
ಬಿ.ವಿ.ಶ್ರೀನಿವಾಸ್,
ರಾಜ್ ಬಬ್ಬರ್,
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ನಟಿ ರಮ್ಯಾ(ದಿವ್ಯ ಸ್ಪಂದನ),
ಇಮ್ರಾನ್ ಪ್ರತಾಪ್ ಗಡಿ,
ಕನ್ಹಯ್ಯ ಕುಮಾರ್,
ರೂಪಾ ಶಶಿಧರ್,
ಖ್ಯಾತ ನಟ ಸಾಧುಕೋಕಿಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top