fbpx
ಸಮಾಚಾರ

ಮುಂದಿನ ಸಲ ಬನ್ನಿ, Rcbians ಜಾತ್ರೆನೆ ಮಾಡ್ತಾರೆ! LSG ಮತ್ತು ಗೌತಮ್ ಗಂಭೀರ್ ಗೆ ಮಾತಿನ ಮೂಲಕ ಟಾಂಗ್ ಕೊಟ್ಟ ಸಿಂಪಲ್ ಸುನಿ

ನೆನ್ನೆ ನಡೆದ RCB ಮತ್ತು LSG ಪಂದ್ಯ RCB ಅಭಿಮಾನಿಗಳ ಪಾಲಿಗೆ ಮರೆಯಲಾಗದ ದಿನ. ಏಕೆಂದರೆ ಈ ಪಂದ್ಯಕ್ಕಾಗಿ RCB ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಹಿಂದಿನ ಪಂದ್ಯದಲ್ಲಿ ಆದ ಅವಮಾನವನ್ನು ಈ ಪಂದ್ಯದಲ್ಲಿ RCB ಆಟಗಾರರು ಬಡ್ಡಿ ಸಮೇತ LSG ತಂಡಕ್ಕೆ ನೀಡಿದ್ದು, ಇದು RCB ಅಭಿಮಾನಿಗಳಲ್ಲಿ ಸಂತಸ ಹುಟ್ಟಿಸಿದೆ. ಇದೀಗ ಈ ವಿಷಯದ ಕುರಿತು ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಪ್ರತ್ರಿಕ್ರಿಯೆ ನೀಡಿದ್ದಾರೆ.

ಆರ್‌ಸಿಬಿ ಗೆಲುವು ರ್ಕಬ್ ಅಭಿಮಾನಿಗಳ ಪಾಲಿಗೆ ದೊಡ್ಡ ಸಂಭ್ರಮವಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅರ್ಭಟ, ರಿಯಾಕ್ಷನ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೊದಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ವಿರುದ್ಧ ಗಂಭೀರ್ ಪಡೆ ಗೆದ್ದು ಬೀಗಿತ್ತು. ಇಷ್ಟಕ್ಕೆ ಸುಮ್ಮನಿರದ ಗಂಭೀರ್ RCB ಅಭಿಮಾನಿಗಳಿಗೆ ಸೈಲೆಂಟ್ ಆಗಿರಲು ಸೂಚಿಸಿದರು. ಇದು RCB ಅಭಿಮಾನಿಗಳನ್ನು ಬಹಳಷ್ಟು ಕೆರಳಿಸಿತು. ಇದೀಗ LSG ಮನೆಅಂಗಳದಲ್ಲಿ LSG ತಂಡವನ್ನು ಹೀನಾಯವಾಗಿ ಸೋಲಿಸಿ ಸೇಡಿಗೆ ಸೇಡು ತಿರುಸಿಕೊಂಡಿದೆ. ಇದೀಗ ಈ ಮ್ಯಾಚ್ ಅನ್ನು ಸ್ವತಃ ನಿರ್ದೇಶಕ ಸಿಂಪಲ್ ಸುನಿ ಮೈದಾನದಲ್ಲಿ ವೀಕ್ಷಿಸಿ ಇದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

 

 

‘ಅಭಿಮಾನಿಗಳು ಮರೀಬಹುದು. ಆದ್ರೆ ಕೊಹ್ಲಿ ಮರೆಯೋಲ್ಲ. ಚಿನ್ನಸ್ವಾಮಿಲಿ ಅಭಿಮಾನಿಗಳಿಗೆ Shhh ಹೇಳಿದ್ದು ನೋಡಿದರೆ ಲಖನೌ ಅಲ್ಲೇ RCB ಕೊಗಿನ ಹಬ್ಬ ನೆಡಿತಿದೆ. ಮುಂದಿನ ಸಲ ಚಿನ್ನಸ್ವಾಮಿಗೆ ಬನ್ನಿ Rcbians ಜಾತ್ರೆನೇ ಮಾಡ್ತಾರೆ. Aavesh ಖಾನ್ ಅವೇಶ ಇರಲಿ. ನಿಂಗ್ ಮ್ಯಾಚ್ ಅಲ್ಲಿ ಜಾಗನೇ ಇಲ್ವೇಲ್ಲಪ್ಪ’ ಎಂದು ಟಾಂಗ್ ನೀಡಿದ್ದಾರೆ. ‘ನೀನು ಉರಿಸೋದಾದ್ರೆ ಉರ್ಕೊಳೋಕ್ಕೂ ರೆಡಿ ಇರಬೇಕು’ ಎಂದು ಹೇಳಿದ್ದಾರೆ. ತಿರುಗಿ ಕೊಟ್ರೆ ಬಡ್ಡಿ ಸಮೇತಾ ಕೊಡುದು ಇದು ಕಿಂಗ್ ಕೊಹ್ಲಿ ಸ್ಟೈಲ್ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top