ಮೇ 22, 2023 ಸೋಮವಾರ
ವರ್ಷ : 1945, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ತೃತೀಯಾ : May 21 10:09 pm – May 22 11:19 pm; ಚತುರ್ಥೀ : May 22 11:19 pm – May 24 12:58 am
ನಕ್ಷತ್ರ : ಮೃಗಶಿರ: May 21 09:04 am – May 22 10:37 am; ಆರುಧ್ರ: May 22 10:37 am – May 23 12:38 pm
ಯೋಗ : ಧೃತಿ: May 21 04:43 pm – May 22 04:33 pm; ಶೂಲ: May 22 04:33 pm – May 23 04:46 pm
ಕರಣ : ತೈತುಲ: May 21 10:10 pm – May 22 10:40 am; ಗರಿಜ: May 22 10:40 am – May 22 11:19 pm; ವಾಣಿಜ: May 22 11:19 pm – May 23 12:05 pm
Time to be Avoided
ರಾಹುಕಾಲ : 7:31 AM to 9:06 AM
ಯಮಗಂಡ : 10:41 AM to 12:16 PM
ದುರ್ಮುಹುರ್ತ : 12:41 PM to 01:32 PM, 03:13 PM to 04:03 PM
ವಿಷ : 07:43 PM to 09:27 PM
ಗುಳಿಕ : 1:51 PM to 3:26 PM
Good Time to be Used
ಅಮೃತಕಾಲ : 01:48 AM to 03:32 AM
ಅಭಿಜಿತ್ : 11:50 AM to 12:41 PM
Other Data
ಸೂರ್ಯೋದಯ : 5:56 AM
ಸುರ್ಯಾಸ್ತಮಯ : 6:35 PM
ಮೇಷ (Mesha)
ಒಡಲಲ್ಲಿ ದುಃಖ ಮುಖದಲ್ಲಿ ಮಂದಹಾಸ ಹಾಗಾಗಿ ನಿಮ್ಮ ನೈಜತೆಯನ್ನು ಅರಿಯದ ಜನರು ಟೀಕೆ ಮಾಡುವರು. ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರಿ. ಭಗವಂತನ ಕೃಪೆಯಿಂದ ಎಲ್ಲವೂ ಸುಗಮವಾಗಿ ಕಾರ್ಯ ನೆರವೇರುವುದು.
ವೃಷಭ (Vrushabh)
ದೃಢ ಮನಸ್ಸಿನ ವ್ಯಕ್ತಿಗಳಿಗೆ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಅಂತೆಯೇ ಇತರೆಯವರಿಗೆ ಕಠಿಣ ಅನಿಸಿದ್ದನ್ನು ನೀವು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದರಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.
ಮಿಥುನ (Mithuna)
ಕೆಲಸ ಹುಡುಕುತ್ತಿರುವವರಿಗೆ ಇಂದು ಶುಭ ಸುದ್ದಿ ದೊರೆಯಲಿದೆ. ಕಠಿಣ ಪ್ರಯತ್ನದಿಂದ ಕಾರ್ಯ ಸಿದ್ಧಿಸುವುದು. ಮನೆದೇವರ ಹಾಗು ಗುರುಹಿರಿಯರ ಆಶೀರ್ವಾದದಿಂದ ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ಕರ್ಕ (Karka)
ಋುಣಾತ್ಮಕ ವ್ಯಕ್ತಿಗಳ ಮಾತಿಗೆ ಕಿವಿಗೊಡದಿರಿ. ಅವರು ನಿಮ್ಮ ಗುರಿ ತಲುಪಿಸುವ ಪ್ರಯತ್ನವನ್ನು ಮಾಡುವರು. ನೀವು ಹೊರಟಿರುವ ದಾರಿ ಸರಿ ಇದ್ದಲ್ಲಿ ಇನ್ನೊಬ್ಬರ ಹಿತವಚನ ನಿಮಗೆ ಅಗತ್ಯವಿಲ್ಲ. ಧೈರ್ಯದಿಂದ ಮುನ್ನುಗ್ಗಿರಿ.
ಸಿಂಹ (Simha)
ಅನಗತ್ಯವಾದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದಿರಿ. ಹೊಸ ವ್ಯಕ್ತಿಗಳ ಪರಿಚಯದಿಂದ ಗುರಿ ಸಾಧಿಸುವಿರಿ.ಹಲವು ದಿನಗಳಿಂದ ಬಾಕಿ ಇದ್ದ ಕೆಲಸಗಳು ಇಂದು ಮುಕ್ತಾಯ ಹಂತಕ್ಕೆ ಬರಲಿವೆ. ಆ ಬಗ್ಗೆ ಕೊನೆಯ ಕ್ಷ ಣದ ಮೇಲುಸ್ತುವಾರಿ ಅಗತ್ಯವಿದೆ. ಸ್ನೇಹಿತರ ಹಿತೈಷಿಗಳ ಸಲಹೆ ಪಡೆಯಿರಿ.
ಕನ್ಯಾರಾಶಿ (Kanya)
ನೀವು ನಿಮ್ಮ ಹಿರಿಯರ ಮಾತನ್ನು ಮೀರುವುದು ತರವಲ್ಲ. ನೀವಾಗಿಯೇ ಸಂಕಷ್ಟಕ್ಕೆ ಗುರಿ ಆಗದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚಿರಿ. ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡಬೇಡಿರಿ.
ತುಲಾ (Tula)
ಇಚ್ಛೆ ಇದ್ದಲ್ಲಿ ಕಷ್ಟವಿರಲಾರದು. ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಿದಲ್ಲಿ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಿರಿ. ಸೋಮಾರಿತನ ಬಿಟ್ಟು ಕಾರ್ಯ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು.
ವೃಶ್ಚಿಕ (Vrushchika)
ಹಣಕಾಸು ವಿಷಯದಲ್ಲಿ ಜಾಗ್ರತೆಯಿರಲಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ವಿನಾಕಾರಣ ಉದ್ವೇಗಗೊಳ್ಳುವುದರಿಂದ ಆರೋಗ್ಯದಲ್ಲಿ ತೊಂದರೆಯಾಗುವುದು. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವಿರಿ.
ಧನು ರಾಶಿ (Dhanu)
ಸಕಲರಿಗೂ ಮಾರ್ಗದರ್ಶನ ನೀಡುವ ನಿಮ್ಮನ್ನು ಹತ್ತು ಹಲವು ಜನರು ಬಂದು ಶುಭ ಹಾರೈಸುವರು. ಎಲ್ಲರನ್ನು ನಗುಮುಖದಿಂದಲೇ ಮಾತನಾಡಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮಕರ (Makara)
ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ. ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ಸರ್ಕಾರದ ವತಿಯಿಂದ ಬರುವ ವಾರ್ತೆಯು ನಿಮ್ಮ ಕಾರ್ಯ ನೆರವೇರಿಸಲು ಸಹಾಯವಾಗುವುದು. ಮತ್ತು ಇದರಿಂದ ನಿಮಗೆ ಆನೆಬಲ ಬಂದಂತೆ ಆಗುವುದು.
ಕುಂಭರಾಶಿ (Kumbha)
ವಿವಿಧ ಮೂಲಗಳಿಂದ ಹಣಕಾಸು ಬಂದರೂ ಅಷ್ಟೇ ವೇಗದಲ್ಲಿ ಹಣವು ನೀರಿನಂತೆ ಖರ್ಚಾಗುವುದು. ಆದರೆ ದೈವದ ಸಹಾಯದಿಂದ ನಿಮ್ಮ ಮನೋಗತ ಕಾರ್ಯವು ಸಿದ್ಧಿಸುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ಜಾಗ್ರತೆ ಅಗತ್ಯ.
ಮೀನರಾಶಿ (Meena)
ಸ್ವಸ್ಥ ಮನಸ್ಸು ಉತ್ತಮ ಆರೋಗ್ಯವನ್ನುಂಟು ಮಾಡುವುದು. ಹಾಗಾಗಿ ಮನಸ್ಸು ಪ್ರಫುಲ್ಲತೆಯಿಂದ ಕೂಡಿದ್ದು ಪ್ರಮುಖ ಕಾರ್ಯಗಳು ದೈವದ ಸಹಾಯದಿಂದ ಪೂರ್ಣಗೊಳ್ಳುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
