ಹಿಮಾಚಲ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟಿ ವೈಭವಿ ಉಪಾಧ್ಯಾಯ ಸಾವನ್ನಪ್ಪಿದ್ದಾರೆ. ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಖ್ಯಾತಿಯ ನಟಿ ವೈಭವಿ ಉಪಾಧ್ಯಾಯ ವಿಧಿವಶರಾಗಿದ್ದಾರೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ್ ಉಪವಿಭಾಗದ ಸಿಧ್ವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದು ಈ ವಿಷಯವನ್ನು ಸ್ವತಃ ಚಿತ್ರದ ನಿರ್ಮಾಪಕ ಜೆಡಿ ಮಜಿಥಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜೆಡಿ ಮಜಿಥಿಯಾ ಈ ಬಗ್ಗೆ ಬರೆದಿದ್ದಾರೆ. “ನನಗೆ ನಂಬಲಾಗುತ್ತಿಲ್ಲ. ಜೀವನಕ್ಕೆ ನಂಬಿಕೆ ಇಲ್ಲ. ಚಿತ್ರರಂಗದ ಪ್ರತಿಭಾವಂತ ನಟಿ ಮತ್ತು ನನ್ನ ಉತ್ತಮ ಸ್ನೇಹಿತೆ ವೈಭವಿ ಉಪಾಧ್ಯಾಯ ನಿಧನರಾಗಿದ್ದಾರೆ. ‘ಸಾರಾಭಾಯಿ ವರ್ಸಸ್ ಸಾರಾಭಾಯ್’ ಚಿತ್ರದ ವೈಭವಿ ಇನ್ನಿಲ್ಲ.. ಮೃತದೇಹವನ್ನು ಕುಟುಂಬಸ್ಥರು ಮುಂಬೈಗೆ ತರಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. REST
IN PEACE ವೈಭವಿ” ಎಂದು ಪೋಸ್ಟ್ ಮಾಡಿದ್ದಾರೆ.
ಜೆಡಿ ಮಜಿಥಿಯಾ ನಂತರ, ಟಿವಿ ಧಾರಾವಾಹಿ ‘ಅನುಪಮಾ’ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಅವರು ವೈಭವಿ ಅವರ ಚಿತ್ರವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ವೈಭವಿ ಧಾರಾವಾಹಿಯ ಜೊತೆಗೆ ಛಪಾಕ್, ಸಿಟಿ ಲೈಟ್ಸ್, ತಿಮಿರ್ ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಹಲವಾರು ಗುಜರಾತಿ ನಾಟಕಗಳಲ್ಲಿ ನಟಿಸಿದ್ದಾರೆ. ವೈಭವಿ 2020 ರಲ್ಲಿ ‘ಛಪಾಕ್’ ಮತ್ತು ‘ತಿಮಿರ್’ (2023) ನಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ಕೆಲಸ ಮಾಡಿದರು. ನಟಿ ವೈಭವಿ ಉಪಾಧ್ಯಾಯ ಅವರ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
