fbpx
ಸಮಾಚಾರ

ಇಂಜಿನಿಯರಿಂಗ್ ಓದಿ ಕೇವಲ ಟೆನಿಸ್ ಬಾಲ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಈತ ರಾತ್ರೋರಾತ್ರಿ ಮುಂಬೈ ತಂಡದ ಸ್ಟಾರ್ ಆಟಗಾರನಾದ!

ನೆನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಎಲಿಮಿನೇಟರ್ ಪದ್ಯದಲ್ಲಿ ಮುಂಬೈ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವನ್ನು ದಾಖಲಿಸಿತು. ಆದರೆ ಇದೀಗ ಈ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದು, ಆಕಾಶ್ ಮಧ್ವಾಲ್.

2019ರಲ್ಲಿ ಮೊದಲ ಬಾರಿ ರೆಡ್ ಬಾಲ್ ಕ್ರಿಕೆಟ್ ಟ್ರಯಲ್ಸ್‍ನಲ್ಲಿ ಪಾಲ್ಗೊಂಡಿದ್ದ ಆಕಾಶ್, ಮೊದಲ ಪ್ರಯತ್ನದಲ್ಲೇ ಉತ್ತರಾಖಂಡ್ ತಂಡದ ಅಂದಿನ ಕೋಚ್ ವಸೀಮ್ ಜಾಫರ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. 24ನೇ ವಯಸ್ಸಿನವರೆಗೂ ಲೆದರ್ ಬಾಲ್ ಆಡಿರದ ಆಕಾಶ್, ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎದುರು 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ದಾಖಲೆ ಸರಿಗಟ್ಟಿದ್ದರು.

ಇವರು ಓದಿದ್ದು ಇಂಜಿನಿಯರಿಂಗ್. ಇವರು ವೈಟ್ ಬಾಲ್ ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿರಲಿಲ್ಲ. ಕೇವಲ ಟೆನಿಸ್ ಬಾಲ್ ನಲ್ಲಿ ಮಾತ್ರ ಅಭ್ಯಾಸಮಾಡುತ್ತಿದ್ದರು. ಇನ್ನು ಇವರ ಸಾಧನೆ ಕುರಿತು ಮಾತನಾಡಿದ ಮುಖ್ಯ ಕೋಚ್ ಮನೀಶ್ ಜಾ ” ವಿಶಿಷ್ಟ ಬೌಲಿಂಗ್ ಶೈಲಿಯ ಆಕಾಶ್ ಅವರಲ್ಲಿ ವಿಶೇಷ ಸಾಮಥ್ರ್ಯವಿದೆ. ಹೀಗಾಗಿ 2019ರ ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯಕ್ಕೆ ಅವರನ್ನು ಅಂದಿನ ಕೋಚ್ ವಸೀಮ್ ಜಾಫರ್ ನೇರವಾಗಿ ಆಯ್ಕೆ ಮಾಡಿದ್ದರು. ಟೂರ್ನಿಯಲ್ಲಿ ಅವರು ರನ್ ನೀಡಿದರೂ ಬೌಲಿಂಗ್ ಮಾಡಿಸಿದ್ದೆ. ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಅವರ ಬೌಲಿಂಗ್ ಸುಧಾರಣೆಗೊಳ್ಳುತ್ತದೆ ಎಂದಿದ್ದೆ” ಎಂದು ಹೇಳಿದರು.

ಆಕಾಶ್ ಟೆನಿಸ್ ಬಾಲ್ ಆಟಗಾರ ಹೀಗಾಗಿ ಅವರ ಬೌಲಿಂಗ್‍ನಲ್ಲಿ ವೇಗವಿತ್ತಾದರೂ ನೇರ ಮತ್ತು ನಿಖರತೆ ಇರಲಿಲ್ಲ. ಈ ನಡುವೆ ತಮ್ಮ ಬೌಲಿಂಗ್‍ನಲ್ಲಿ ಹಲವು ಪ್ರಯೋಗ ಕೂಡ ಮಾಡುತ್ತಿದ್ದರು. ಉತ್ತಮ ಸಾಮಥ್ರ್ಯ ಇರುವಾಗ ಸ್ಲೋ ಬಾಲ್ ಪ್ರಯತ್ನ ಯಾಕೆ ಎಂದಿದ್ದೆ. ಈಗ ಉತ್ತಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top