fbpx
ಸಮಾಚಾರ

ಜೂನ್ 01: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 1, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ : May 31 01:46 pm – Jun 01 01:39 pm; ತ್ರಯೋದಶೀ : Jun 01 01:39 pm – Jun 02 12:48 pm
ನಕ್ಷತ್ರ : ಚಿತ್ತ: May 31 06:00 am – Jun 01 06:48 am; ಸ್ವಾತಿ: Jun 01 06:48 am – Jun 02 06:53 am
ಯೋಗ : ವಾರಿಯ: May 31 08:15 pm – Jun 01 06:59 pm; ಪರಿಘ: Jun 01 06:59 pm – Jun 02 05:09 pm
ಕರಣ : ಬಾಲವ: Jun 01 01:48 am – Jun 01 01:39 pm; ಕುಲವ: Jun 01 01:39 pm – Jun 02 01:19 am; ತೈತುಲ: Jun 02 01:19 am – Jun 02 12:48 pm

Time to be Avoided
ರಾಹುಕಾಲ : 1:52 PM to 3:28 PM
ಯಮಗಂಡ : 5:56 AM to 7:31 AM
ದುರ್ಮುಹುರ್ತ : 10:10 AM to 11:01 AM, 03:15 PM to 04:06 PM
ವಿಷ : 12:25 PM to 02:02 PM
ಗುಳಿಕ : 9:06 AM to 10:42 AM

Good Time to be Used
ಅಮೃತಕಾಲ : 10:03 PM to 11:39 PM
ಅಭಿಜಿತ್ : 11:51 AM to 12:42 PM

Other Data
ಸೂರ್ಯೋದಯ : 5:56 AM
ಸುರ್ಯಾಸ್ತಮಯ : 6:38 PM
 

ನಿಮ್ಮ ಬಹುದಿನದ ಕನಸು ನನಸಾಗುವಂತೆ ಆಗಲು, ಹಿರಿಯರೊಡನೆ ಆಪ್ತ ಸಮಾಲೋಚನೆ ನಡೆಸಿ. ಇದರಿಂದ ಒಳಿತಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ.

ನೀವು ನಿಮ್ಮ ಪಾಡಿಗೆ ಇದ್ದಷ್ಟು ನಿಮ್ಮನ್ನು ಮುಖ್ಯ ವಿಚಾರ ಒಂದರಲ್ಲಿ ಮಧ್ಯವರ್ತಿಯಾಗಿ ತೀರ್ಮಾನ ನೀಡಬೇಕೆಂದು ಒತ್ತಾಯ ಬರುವುದು. ಇದು ನಿಮಗೆ ಸಂದಿಗ್ಧ ಪರಿಸ್ಥಿತಿಯನ್ನು ತಂದುಕೊಡುವುದು.

ನೆರೆಹೊರೆಯ ಜನ ಅನವಶ್ಯಕವಾದ ತೊಂದರೆ ತರುವ ಸಾಧ್ಯತೆ ಇದೆ. ಇದರಿಂದ ಪಾರಾಗಲು ಕಾನೂನಾತ್ಮಕ ಸಲಹೆ ಸಹಕಾರಗಳನ್ನು ಪಡೆಯಿರಿ. ಒಳಿತಾಗುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಕೆಲವು ದಿನಗಳಿಂದ ಸಕಾರಾತ್ಮಕ ಕೆಲಸಗಳಿಗೆ ಅಡೆತಡೆ ಉಂಟಾಗುತ್ತಿರುವುದರಿಂದ ಒಂದು ರೀತಿ ಅವ್ಯಕ್ತ ಭಯ ಕಾಡುವುದು. ಆದರೆ ಹೆದರಿಕೊಳ್ಳುವ ಅವಶ್ಯಕತೆಯಿಲ್ಲ. ಸ್ವಜನರ ಪ್ರೋತ್ಸಾಹ ಬೆಂಬಲ ದೊರೆಯಲಿದೆ.

 

ನಿಮ್ಮ ಯೋಜನೆಗಳೆಲ್ಲ ಲಾಭದ ದಾರಿಗೆ ಸಾಗಲಾರವು. ಆದ್ದರಿಂದ ಗುರು ಹಿರಿಯರ ಮಾತನ್ನು ಆಲಿಸಿ. ಹಿತೈಷಿಗಳ ಹಿತವಚನ ಪಾಲಿಸಿದಲ್ಲಿ ಹೆಚ್ಚಿನ ಅನುಕೂಲ ಹೊಂದುವಿರಿ. ಆರ್ಥಿಕ ಸಂಕಷ್ಟ ಎದುರಿಸುವಿರಿ.

 

ಕೇವಲ ಮಾತಿನಿಂದ ಕೆಲಸ ಆಗುವುದಿಲ್ಲ. ಅದಕ್ಕೆ ದೈಹಿಕ ಮತ್ತು ಮಾನಸಿಕ ಶ್ರಮ ಎರಡನ್ನೂ ಹಾಕಬೇಕು. ಕೆಲಸ ಪೂರ್ಣವಾಗಿ ನೆರವೇರಲು ಆಂಜನೇಯ ಸ್ತೋತ್ರ ಪಠಿಸಿ. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ.

 

ಬಹುದಿನದಿಂದ ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ದೊರೆಯುವುದು. ಇದರಿಂದ ಮನಸ್ಸು ನಿರಾಳವಾಗುವುದು ಮತ್ತು ಮುಂದಿನ ಕೆಲಸ ಮಾಡಲು ಉತ್ಸಾಹ ಬರುವುದು. ಹಣಕಾಸು ಬರುವುದು

 

ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡಂತೆ ಮಾತಿನ ಚಕಮಕಿಯೊಂದು ನಿಮ್ಮನ್ನು ಮನಸ್ಸನ್ನು ಕಲಕಿ ಸಂತೋಷ ಹಾಳು ಮಾಡುವುದು. ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕಿ.

 

ಏಕಾಂತ ನಿಮ್ಮ ಮನಸ್ಸನ್ನು ಹಿಂಡುತ್ತಿದೆ. ಮನುಜ ಸಂಘಜೀವಿ. ಹಾಗಾಗಿ ಆದಷ್ಟು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗೆಳೆಯರೊಡನೆ ಬೆರೆಯಿರಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ಎಲ್ಲಾ ಕೆಲಸ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಕೆಲಸ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲ ಕೆಲಸಗಳು ಇನ್ನು ಹೆಚ್ಚಿನ ಪರಿಪಕ್ವತೆಯಿಂದ ಯಶಸ್ಸು ಹೊಂದುವುದು.

 

 

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸ ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.

ದೃಢ ನಿರ್ಧಾರ ತಳೆಯುವಲ್ಲಿ ಹೆಸರಾದ ನಿಮಗೆ ಇಂದಿನ ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ ್ಮವಾಗಿ ಗಮನಿಸಿ ಅದರಲ್ಲಿ ವಿಜಯವನ್ನು ತಂದುಕೊಳ್ಳಲು ನಿಮ್ಮ ಪರಿಪಕ್ವ ಮನಸ್ಸು ಸಹಾಯ ಮಾಡುವುದು. ಇದಕ್ಕೆ ಸಂಗಾತಿ ನೆರವು ಸಿಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top