ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಂತಹ ಮಹಾನ್ ವ್ಯಕ್ತಿಗೆ ಬಿಜೆಪಿ ನಾಯಕರು ವಿಷ ಕುಡಿಸಿ ರಾಜಕೀಯವಾಗಿ ಹತ್ಯೆ ಮಾಡಿದ್ದಾರೆ ಎಂದು ಸಾಹಿತಿ ದೇವನೂರು ಮಹಾದೇವ ಆರೋಪಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದೇವನೂರು ಮಹಾದೇವ, ಬಿ.ಎಸ್. ಯಡಿಯೂರಪ್ಪ ಅವರು ಒಬ್ಬರು ಮಾಸ್ ಲೀಡರ್. ಯಡಿಯೂರಪ್ಪರಿಗೇ ವಿಷದ ಇಂಜೆಕ್ಷನ್ ಕೊಟ್ರು. ಯಡಿಯೂರಪ್ಪ ಬಿಜೆಪಿಯ ದೊಡ್ಡ ಮರ ಇದ್ದಹಾಗೆ. ವಿಷದ ಇಂಜೆಕ್ಷನ್ ಕೊಟ್ಟ ಪರಿಣಾಮ ಮರ ಒಣಗುತ್ತಿದೆ ಎಂದರು.
ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಜನನಾಯಕರ ಅಗತ್ಯವಿಲ್ಲ, ಹೈಕಮಾಂಡ್ ಹೇಳಿದಂತೆ ಕೇಳುವ ನಾಯಕರು ಬೇಕು. ಇಂತಹ ರಾಜಕಾರಣದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಹೊರಹಾಕಲಾಯಿತು. ಸೋಮಣ್ಣ ಅವರನ್ನು ಕ್ಷೇತ್ರ ಬದಲಿಸಿ ರಾಜಕೀಯವಾಗಿ ಶಿಕ್ಷಿಸುತ್ತಿದ್ದಾರೆ ಎಂದು ಮಹದೇವ ಟೀಕಿಸಿದರು. ವಿಜಯೇಂದ್ರ ಅವರನ್ನೂ ಸೋಲಿಸಲು ಯತ್ನಿಸಿ ವಿಫಲರಾದರು ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
