ಜನಪ್ರಿಯ ಬಾಲಿವುಡ್ ನಟಿ ಕರೀನಾ ಕಪೂರ್ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ನಡುವಿನ ಕುತೂಹಲಕಾರಿ ಸಂಭಾಷಣೆ ಇದೀಗ ವೈರಲ್ ಆಗಿದೆ. ಕರೀನಾ ಅವರ ಅಭಿಮಾನಿಗಳ ಬಗ್ಗೆ ಕಾಳಜಿ ಇಲ್ಲ ಎಂದು ನಾರಾಯಣ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಾರಾಯಣ ಮೂರ್ತಿ ದಂಪತಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ಇನ್ಫಿ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕರೀನಾ ಕುರಿತು ಮಾತನಾಡುತ್ತಾ… ”ಒಮ್ಮೆ ನಾನು ಲಂಡನ್ ನಿಂದ ಬರುತ್ತಿದ್ದ ವೇಳೆ ವಿಮಾನದಲ್ಲಿ ನನ್ನ ಪಕ್ಕದ ಸೀಟಿನಲ್ಲಿ ನಟಿ ಕರೀನಾ ಕಪೂರ್ ಕುಳಿತಿದ್ದರು. ಅವಳನ್ನು ನೋಡಿದ ಅನೇಕ ಜನರು ಅಲ್ಲಿಗೆ ಬಂದು ಅವಳನ್ನು ಸ್ವಾಗತಿಸಿದರು. ಆದರೆ, ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಯಾರಾದರೂ ನಮ್ಮ ಬಳಿಗೆ ಬಂದು ನಮಸ್ಕಾರ ಮಾಡಿದರೆ, ನಾವು ಎದ್ದು ನಿಂತು ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡುತ್ತೇವೆ. ಅದನ್ನೇ ಅವರು ನಮ್ಮಿಂದ ಬಯಸುತ್ತಿದ್ದಾರೆ,” ಎಂದು ಹಿಂದೆ ನಡೆದ ಘಟನೆಯನ್ನು ನಾರಾಯಣ ಮೂರ್ತಿ ನೆನಪಿಸಿಕೊಂಡರು.
ಆಗ ಪಕ್ಕದಲ್ಲೇ ಇದ್ದ ಸುಧಾ ಮೂರ್ತಿ ಅವರು ಮಾತನಾಡುತ್ತಾ, “ಬಹುಶಃ ಆ ಸಮಯದಲ್ಲಿ ಕರೀನಾ ದಣಿದಿರಬಹುದು. ಸಾಫ್ಟ್ ವೇರ್ ವ್ಯಕ್ತಿ ಹಾಗೂ ಕಂಪನಿ ಸಂಸ್ಥಾಪಕ ನಾರಾಯಣ ಮೂರ್ತಿಗೆ ಹತ್ತು ಸಾವಿರ ಅಭಿಮಾನಿಗಳು ಇರಬಹುದು! ಆದರೆ, ಸಿನಿಮಾ ನಟಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ,” ಎಂದರು. ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.ಆ ನಂತರ ನಾರಾಯಣ ಮೂರ್ತಿಯವರು ತಮ್ಮ ಮಾತನ್ನು ಮುಂದುವರೆಸಿ “ಇಲ್ಲಿನ ಸಮಸ್ಯೆ ಅದಲ್ಲ. “ಯಾರಾದರೂ ನಮ್ಮ ಮೇಲೆ ಪ್ರೀತಿ ತೋರಿಸಿದಾಗ… ಆ ಪ್ರೀತಿಯನ್ನು ನಾವು ಮತ್ತೆ ತೋರಿಸಬೇಕು” ಎಂದು ಅವರು ಹೇಳಿದರು. ಇದೀಗ ವಿಡಿಯೋ ವೈರಲ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
