fbpx
ಸಮಾಚಾರ

ಆಗಸ್ಟ್ 02: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಆಗಸ್ಟ್ 2, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪ್ರತಿಪತ್ : Aug 02 12:01 am – Aug 02 08:06 pm; ದ್ವಿತೀಯಾ : Aug 02 08:06 pm – Aug 03 04:17 pm
ನಕ್ಷತ್ರ : ಶ್ರವಣ: Aug 01 04:03 pm – Aug 02 12:58 pm; ಧನಿಷ್ಠ: Aug 02 12:58 pm – Aug 03 09:56 am
ಯೋಗ : ಆಯುಷ್ಮಾನ್: Aug 01 06:52 pm – Aug 02 02:33 pm; ಸೌಭಾಗ್ಯ: Aug 02 02:33 pm – Aug 03 10:17 am
ಕರಣ : ಬಾಲವ: Aug 02 12:01 am – Aug 02 10:03 am; ಕುಲವ: Aug 02 10:03 am – Aug 02 08:06 pm; ತೈತುಲ: Aug 02 08:06 pm – Aug 03 06:10 am

Time to be Avoided
ರಾಹುಕಾಲ : 12:25 PM to 2:00 PM
ಯಮಗಂಡ : 7:43 AM to 9:17 AM
ದುರ್ಮುಹುರ್ತ : 12:00 PM to 12:51 PM
ವಿಷ : 04:28 PM to 05:51 PM
ಗುಳಿಕ : 10:51 AM to 12:25 PM

Good Time to be Used
ಅಮೃತಕಾಲ : 12:51 AM to 02:15 AM

Other Data
ಸೂರ್ಯೋದಯ : 6:09 AM
ಸುರ್ಯಾಸ್ತಮಯ : 6:42 PM

 

 

ಮೇಷ (Mesha)

 

ಬಾಳಸಂಗಾತಿಯ ಕಾರಣದಿಂದ ನಿಮ್ಮ ಘನತೆಗೆ ಹೆಚ್ಚಿನ ತೂಕ ಬರಲಿದೆ. ಎಲ್ಲರೂ ನಿಮ್ಮ ಬುದ್ಧಿಮತ್ತೆಯನ್ನು ಕೊಂಡಾಡುವರು. ಅನ್ಯರಿಂದ ಕೈಗಡ ಪಡೆದದ್ದನ್ನು ವಾಪಸ್ಸು ಮಾಡಲು ಚಿಂತಿಸುವಿರಿ. ವಿವಿಧ ಮೂಲಗಳಿಂದ ಹಣ ಬರುವುದು.

ವೃಷಭ (Vrushabh)


ಮನಸ್ಸಿಗೆ ಬೇಡದ ವಿಚಾರಗಳು ಈದಿನ ಮನಸ್ಸನ್ನು ಗಲಿಬಿಲಿಗೊಳಿಸುವುದು. ಇದಕ್ಕೆ ಪೂರಕವಾಗಿ ಮನೆಯಲ್ಲಿನ ಮಕ್ಕಳ ತುಂಟಾಟವು ನಿಮ್ಮ ನೆಮ್ಮದಿಯನ್ನು ಹಾಳು ಮಾಡಿ ಕೋಪಗೊಳ್ಳುವಂತೆ ಮಾಡುವುದು. ತಾಳ್ಮೆ ಇರಲಿ.

ಮಿಥುನ (Mithuna)


ನಿಮ್ಮ ಮನೋಕಾಮನೆಗಳು ಈದಿನ ಪೂರ್ಣಗೊಳ್ಳುವುದು. ನೂತನ ಜನರ ಭೇಟಿ ಆಗುವುದು. ಮನೆಗೆ ದೂರದ ಊರಿನಿಂದ ನೆಂಟರು ಬರುವ ಸಾಧ್ಯತೆ. ಯೋಗ್ಯ ವಧು-ವರರಿಗೆ ವಿವಾಹದ ಮಾತುಕತೆಯಿಂದ ಸಂಭ್ರಮ.

ಕರ್ಕ (Karka)


ಹಮ್ಮಿಕೊಂಡ ಕಾರ್ಯಗಳಲ್ಲಿ ಅಲ್ಪ ಹಿನ್ನಡೆಯಾದರೂ ಆ ಕಾರ್ಯದ ಬಗ್ಗೆ ಸೂಕ್ತ ಮಾಹಿತಿ ದೊರೆತು ಅದನ್ನು ಸರಿಪಡಿಸುವಿರಿ. ಮತ್ತು ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣವನ್ನು ಔಷಧದಂತೆ ಖರ್ಚು ಮಾಡಿರಿ.

ಸಿಂಹ (Simha)


ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿರಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ಈದಿನ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

ಕನ್ಯಾರಾಶಿ (Kanya)


ನಿಮ್ಮ ಕೆಲಸ ಕಾರ್ಯಗಳು ಸಾರ್ಥಕವಾಗಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲ ಹಾಲು ಎಂದು ನಂಬಿ ಮೋಸಹೋಗದಿರಿ.

ತುಲಾ (Tula)


ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನು ಗೌರವಿಸಿ. ಮುಂದೆ ಉತ್ತಮ ದಿನಗಳಿವೆ.

ವೃಶ್ಚಿಕ (Vrushchika)


ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ಇಂದು ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿ ಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರಿಸಬಹುದು.

ಧನು ರಾಶಿ (Dhanu)


ಇಟ್ಟ ಗುರಿ ಬಿಟ್ಟ ಬಾಣ ನೇರವಾಗಿ ಇರಬೇಕು. ಆದರೆ ನಿಮ್ಮ ರಾಶಿಯಲ್ಲಿ ಕುಳಿತ ಶನಿಮಹಾರಾಜರು ನಿಮ್ಮಲ್ಲಿ ಸ್ವಲ್ಪ ಆಲಸ್ಯವನ್ನು ತುಂಬುವರು. ಹಾಗಾಗಿ ಈದಿನ ನಿರ್ದಿಷ್ಟ ಗುರಿಯನ್ನು ತಲುಪಲಾರಿರಿ.

ಮಕರ (Makara)


ಕೆಲವು ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ, ಸ್ವಉದ್ಯೋಗ ಯೋಜನೆಗಳಿಗೆ ಚಾಲನೆ ದೊರೆಯುವುದು ಮತ್ತು ಅದರಿಂದ ಸಾಕಾರ ಸಿದ್ಧಿ ಲಭಿಸುವುದು. ಆಂಜನೇಯ ಸ್ತೋತ್ರ ಪಠಿಸಿರಿ.

ಕುಂಭರಾಶಿ (Kumbha)


ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸದೇ ಆದ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ಈದಿನ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು

ಮೀನರಾಶಿ (Meena)


ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರ ಸುಖವಾಗಿರುವುದು. ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳು ಮಾಡಿಕೊಳ್ಳದಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top