fbpx
ಸಮಾಚಾರ

ರಕ್ಷಾ ಬಂಧನ್ ಆಚರಣೆಯ ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇವು

ನಾಳೆ ಆಗಸ್ಟ್ 11. ಅಣ್ಣ ತಂಗಿ, ಅಕ್ಕ ತಮ್ಮಂದಿರ ಪಾಲಿಗೆ ಇದು ವಿಶೇಷವಾದ ದಿನ. ಏಕೆಂದರೆ ನಾಳೆ ರಕ್ಷಾ ಬಂಧನ್. ಈ ದಿನ ಸಹೋದರ ಸಹೋದರಿಯರು ಪ್ರೀತಿ ವಾತ್ಸಲ್ಯದಿಂದ ಕೂಡಿರುತ್ತಾರೆ. ಆದರೆ ರಕ್ಷಾ ಬಂಧನ್ ಕ್ರಮಬದ್ಧವಾಗಿ ಹೇಗೆ ಆಚರಿಸಬೇಕು ಎಂಬುದು ಕೆಲವರಿಗೆ ತಿಳಿದಿಲ್ಲ. ಇದರ ಕುರಿತು ಒಂದು ಸಣ್ಣ ಮಾಹಿತಿ.

ಸಹೋದರನ ಕೈಗೆ ರಾಕಿ ಕಟ್ಟಲು ನಾಳೆ ಬೆಳಗೆ 9.28ರಿಂದ ರಾತ್ರಿ 9:14ರವರೆಗೆ ಇರುತ್ತದೆ. ಈ ವೇಳೆಯಲ್ಲಿ ಸಹೋದರಿ ತನ್ನ ಸಹೋದರನಿಗೆ ರಾಕಿ ಕಟ್ಟಿದರೆ ಒಳ್ಳೆಯದು ಎಂದು ಹೇಳಬಹುದು. ಇದಾದ ನಂತರ ಸಹೋದರ ತನ್ನ ಸಹೋದರಿಗೆ ತಾನು ಕೊನೆಯವರೆಗೂ ನಿನ್ನನು ಕಾಪಾಡುತ್ತೇನೆ ಎಂಬ ಭರವಸೆಯನ್ನು ನೀಡಬೇಕು. ಇದನ್ನು ಹೊರೆತು ಪಡಿಸಿ ರಕ್ಷಾ ಬಂಧನ್ ಅನ್ನು ಕ್ರಮಬದ್ಧವಾಗಿ ಆಚರಿಸುವ ವಿಧಾನ ಇಲ್ಲಿದೆ.

1. ಈ ದಿನ ಸಹೋದರಿಯರು ಮುಂಜಾನೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿದ ನಂತರ ಹಬ್ಬದ ತಯಾರಿ ಪ್ರಾರಂಭಿಸುತ್ತಾರೆ. ಅಗತ್ಯವಿರುವ ಎಲ್ಲ ಸಾಮಾಗ್ರಿಗಳೊಂದಿಗೆ ಪೂಜೆ ಥಾಲಿಯನ್ನು ತಯಾರಿಸಲಾಗುತ್ತದೆ ಮತ್ತು ದೀಪ ಬೆಳಗಿಸಲಾಗುತ್ತದೆ. ವಿವಾಹಿತ ಸಹೋದರಿಯರು ಸಾಮಾನ್ಯವಾಗಿ ರಕ್ಷಾ ಬಂಧನ್ ಆಚರಣೆಗಳನ್ನು ಮಾಡಲು ತಮ್ಮ ಸಹೋದರನ ಮನೆಗೆ ಭೇಟಿ ನೀಡುತ್ತಾರೆ.

2. ಆಚರಣೆಗಳನ್ನು ಪ್ರಾರಂಭಿಸುವ ಮುಂಚೆ ನಿಮ್ಮ ಸಹೋದರನನ್ನು ಮರದ ಚೌಕಿಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವಂತೆ ಹೇಳಬೇಕು. ನಂತರ ನಿಮ್ಮ ಸಹೋದರನ ಹಣೆಯ ಮೇಲೆ ತಿಲಕವನ್ನು ಹಚ್ಚಿದ ನಂತರ, ಅವನ ಬಲಗೈ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಿ ಮತ್ತು ಅವನ ದೀರ್ಘಾಯುಷ್ಯವನ್ನು ಬಯಸಬೇಕು.

3. ರಾಖಿಯನ್ನು ಕಟ್ಟಿದ ನಂತರ ಆರತಿ ಮಾಡಿ ಕಿರಿಯರು ತಮ್ಮ ಹಿರಿಯ ಸಹೋದರರ ಆಶೀರ್ವಾದವನ್ನು ಪಡೆಯಬೇಕು.

4. ಇದಾದ ನಂತರ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡಿ ಆಕೆಯ ರಕ್ಷಣೆಯ ಪಣ ತೊಡಬೇಕು.

5. ರಕ್ಷಾ ಬಂಧನ ಆಚರಣೆಗಳನ್ನು ಸೋಫಾ ಅಥವಾ ಕುರ್ಚಿಯ ಮೇಲೆ ಕುಳಿತು ಮಾಡಬಾರದು ಮತ್ತು ಸಂಪ್ರದಾಯದ ಪ್ರಕಾರ ಮರದ ಚೌಕಿಯ ಮೇಲೆ ಕೂರಿಸಿ ಮಾಡಬೇಕು. ಈ ದಿನ ಸಹೋದರ ಸಹೋದರಿಯರು ಜಗಳವಾಡಬಾರದು, ಪರಸ್ಪರ ಕೆಟ್ಟ ಮಾತುಗಳನ್ನಾಡಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top