ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಕೆ ಮಾಡುವ ಮಂತ್ರಾಕ್ಷತೆಗೆ ವಿಶಿಷ್ಟ ಆಗಿರುವ ಅರ್ಥ ಇದೆ . ಶ್ರೇಯಸ್ಸು, ಆಶೀರ್ವಾದದ ಪ್ರತೀಕವೇ ಈ ಮಂತ್ರಾಕ್ಷತೆ ಎನ್ನಲಾಗುವುದು. ಸಾಮಾನ್ಯವಾಗಿ ನಾವು ರಾಯರ ಮಠದಲ್ಲಿ ನೀಡುವ ರಾಯರ ಶಕ್ತಿಶಾಲಿ ಮಂತ್ರಾಕ್ಷತೆ ಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಶ್ರದ್ದೆ ಭಕ್ತಿಯಿಂದ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಬಳಸುವುದು ಹೇಗೆ ಮತ್ತು ಅದರ ಶಕ್ತಿ ನಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಇಲ್ಲಿ ನೊಡೋಣ ಬನ್ನಿ.
ಶ್ರೀಗುರು ರಾಘವೇಂದ್ರರ ದೇವಸ್ಥಾನದಲ್ಲಿ ಮಂತ್ರಾಕ್ಷತೆಯ ಪ್ರಾಮುಖ್ಯತೆಯು ಗಮನಕ್ಕೆ ಬರುತ್ತೆ. ಅದೇ ರೀತಿ ಹಲವಾರು ಸ್ಥಳಗಳಲ್ಲಿ ಮಂತ್ರಾಕ್ಷತೆಯನ್ನು ಬಳಕೆ ಮಾಡಲಾಗುತ್ತದೆ. ಆದರೆ ಇದರ ಒಳ ಅರ್ಥ ಮಾತ್ರ ಇಂದಿನ ಯುವಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಗುರು-ಶಿಷ್ಯರ ಬಾಂಧವ್ಯದ ಸಂಕೇತವೂ ಆಗಿರುವ ಮಂತ್ರಾಕ್ಷತೆ ಮಠಕ್ಕೆ ಬರುವ ಶಿಷ್ಯರು ಗುರುಗಳಿಂದ ಆಶೀರ್ವಚನ, ಆಶೀರ್ವಾದ ಪಡೆದು ಮಂತ್ರಾಕ್ಷತೆಯೊಂದಿಗ ತೆರಳುವುದರಿಂದ ಬರಿಗೈಯಲ್ಲಿ ಹೋಗುವುದಿಲ್ಲ ಎಂಬ ವಾಡಿಕೆಯಿದೆ. ಬರುವಾಗ ಫಲ-ತಾಂಬೂಲವನ್ನು ತರುವ ಶಿಷ್ಯರು ಮಠದ ಗುರುಗಳಿಂದ ಮಂತ್ರಾಕ್ಷತೆ ಪಡೆದುಕೊಳ್ಳುವುದು ಸಂಪ್ರದಾಯ ಆಗಿದೆ ಎಂದು ತಿಳಿದು ಬಂದಿದೆ.
ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗವನ್ನು ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ಹೇಳಿಕೊಂಡ ತನ್ನನ್ನು ಅನುಗ್ರಹಿಸಬೇಕೆಂದು ಬೇಡಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದ ಎಂದು ಒಂದು ಹಿಡಿ ಮಂತ್ರಾಕ್ಷತೆಯನ್ನಾದರೂ ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿಕೊಂಡನು ರಾಯರು ಅವನಿಗೆ ಮಂತ್ರಾಕ್ಷತೆ ಕೊಟ್ಟರು.
ಅದನ್ನು ತೆಗೆದುಕೊಂಡು ಊರಕಡೆಗೆ ಹೊರಟ. ದಾರಿ ಮಧ್ಯದಲ್ಲಿ ಕತ್ತಲಾಗಿದ್ದರಿಂದ ದಾರಿಯಲ್ಲಿ ಸಿಕ್ಕ ಮನೆಯೊಂದರಲ್ಲಿ ಉಳಿದುಕೊಳ್ಳಲು ಆಶ್ರಯ ಪಡೆದ ಆ ಮನೆಯ ಮಾಲೀಕನ ಹೆಂಡತಿ ಗರ್ಭಿಣಿ ಆಗಿದ್ದಳು. ಆ ದಿನ ರಾತ್ರಿ ಪಿಶಾಚಿಯೊಂದು ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಮನೆಗೆ ನುಗ್ಗಲು ಯತ್ನಿಸಿತು. ಆದರೆ ಅಲ್ಲೇ ಬಾಗಿಲಲ್ಲೇ ರಾಯರ ಭಕ್ತ ಮಲಗಿದ್ದ ಅವನ ಬಳಿ ಇದ್ದ ಮಂತ್ರಾಕ್ಷತೆ ನೋಡಿ ಪಿಶಾಚಿ ಸುಟ್ಟು ಬೂದಿಯಾಯಿತು. ಎಂದು ತಿಳಿದು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
