ಈ 5 ಪದಾರ್ಥಗಳು ಆರಂಭದಲ್ಲಿ ಮುಖ್ಯ ಸಿಹಿ ತಿಂಡಿಗಳಾಗಿ ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಲಾಗುತ್ತಿತ್ತು. ಶ್ರೀ ಕೃಷ್ಣನು ಪ್ರೀತಿ ಮತ್ತು ಖುಷಿಯ ದೇವರು ಎಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಭಕ್ತಿ ಶ್ರದ್ಧೆಯಿಂದ ಪೂಜಿಸಲಾಗುತ್ತದೆ.
ಭಗವಂತನಾದ ಶ್ರೀ ಕೃಷ್ಣ, ಪ್ರೀತಿಯ ಸಂಕೇತವಾಗಿದ್ದು,ಸಂಗೀತ ಮತ್ತು ನೃತ್ಯ ಅವನನ್ನು ಪ್ರಸನ್ನಗೊಳಿಸುತ್ತದೆ. ಪ್ರೀತಿ ಮತ್ತು ಖುಷಿಯ ದೇವರಾದ ಶ್ರೀ ಕೃಷ್ಣನ ಹಬ್ಬವೇ ಕೃಷ್ಣ ಜನ್ಮಾಷ್ಟಮಿ ಹಬ್ಬ.ಶ್ರೀ ಕೃಷ್ಣನಿಗೆ ಜನ್ಮಾಷ್ಟಮಿಯ ದಿನ ಏನನ್ನು ಅರ್ಪಿಸಬೇಕು ?ಏನನ್ನು ಅರ್ಪಿಸಿದರೆ ಒಳ್ಳೆಯದು ? .ಇದು ಅಷ್ಟು ದೊಡ್ಡ ಹಬ್ಬವೇನು ಅಲ್ಲದಿದ್ದರೂ ಸರಳವಾಗಿ ,ಹೃದಯ ಪೂರ್ವಕವಾಗಿ ಆಚರಿಸುವ ಹಬ್ಬವಿದು.
ಇಂದು ನಾವು ಶ್ರೀ ಕೃಷ್ಣನಿಗೆ ಅರ್ಪಿಸಬೇಕಾದ 5 ಪದಾರ್ಥಗಳನ್ನು ನಾವು ಶ್ರೀ ಕೃಷ್ಣನಿಗೆ ಪೂಜೆ ಮಾಡುವಾಗ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಅರ್ಪಿಸಲಾಗುತ್ತದೆ.
1.ಪಂಚಾಮೃತ.
ಹಾಲು, ಮೊಸರು, ಜೇನು ತುಪ್ಪ,ಶುದ್ಧ ಹಸುವಿನ ತುಪ್ಪ,ಸಕ್ಕರೆ ಮತ್ತು ತುಳಸಿ ಈ 5 ಪದಾರ್ಥಗಳು ಐದು ಮಕರಂದಗಳಿದ್ದ ಹಾಗೆ.ಈ ಐದು ಪದಾರ್ಥಗಳ ಮಿಶ್ರಣವನ್ನೇ ಪಂಚಾಮೃತ ಎಂದು ಕರೆಯುವುದು. ಇವು ಶ್ರೀ ಕೃಷ್ಣನಿಗೆ ಅಷ್ಟೇ ಅಲ್ಲದೆ ಎಲ್ಲಾ ದೇವರಿಗೂ ಸಹ ಅತ್ಯಂತ ಪ್ರಿಯವಾದ ಆಹಾರವಾಗಿವೆ.ಈ ಪಂಚಾಮೃತವನ್ನು ಶ್ರೀ ಕೃಷ್ಣನಿಗೆ ಪರಮಾತ್ಮನಿಗೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುವಾಗ ಅರ್ಪಿಸಬೇಕು.
2.ಬೆಣ್ಣೆ ಮಿಶ್ರಣ.
ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಆಹಾರ ಪದಾರ್ಥವಿದು.ಶ್ರೀಕೃಷ್ಣನಿಗೆ ಬೆಣ್ಣೆಯೆಂದರೆ ತುಂಬಾ ಇಷ್ಟ.ನೀವು ಕೃಷ್ಣನ ಬಾಲ್ಯದ ಕಥೆಗಳನ್ನು ಕೇಳಿರಬೇಕು.ಅದರಲ್ಲಿ ಶ್ರೀ ಕೃಷ್ಣನು ಬೆಣ್ಣೆಯನ್ನು ಕದಿಯುತ್ತಾನೆ, ಕದ್ದು ತಿನ್ನುತ್ತಾನೆ ಅದು ಬಾಲ್ಯದ ದಿನಗಳಲ್ಲಿ.ಬೆಣ್ಣೆ, ಬೆಣ್ಣೆಯ ಜೊತೆ ಸಕ್ಕರೆ,ಏಲಕ್ಕಿಯನ್ನು ಮಿಶ್ರಣ ಮಾಡಿದರೆ ಅದು ಬೆಣ್ಣೆ ಮಿಶ್ರಣ ಅಥವಾ ಮಕನ್ ಮಿಸ್ರಿ ಎಂದು ಕರೆಯಲಾಗುತ್ತದೆ.ಇದು ಕೃಷ್ಣನಿಗೆ ಪ್ರಿಯ . ಆದ್ದರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಬೆಣ್ಣೆಯನ್ನು ಅರ್ಪಿಸುವುದನ್ನು ಮರೆಯಬೇಡಿ.
3.ಹಾಲು ಮತ್ತು ಜೇನು.
ಹಾಲು ಮತ್ತು ಜೇನು ಇವೆರಡು ಪರಿಶುದ್ಧತೆಯ ಸಂಕೇತ ಹಾಗೂ ಇವೆರಡನ್ನು ಮಿಶ್ರಣ ಮಾಡಿದರೆ ಸಿಹಿಯಾಗುತ್ತದೆ ಉತ್ತಮ ಸ್ವಾದ,ರುಚಿ ಅಡಗಿರುತ್ತದೆ.ಆದ್ದರಿಂದ ಇವೆರಡನ್ನು ಶ್ರೀ ಕೃಷ್ಣನಿಗೆ ಅರ್ಪಿಸಲೇಬೇಕು.
4.ಕೇಸರಿ ಮಿಶ್ರಿತ ಅನ್ನ.
ಕೇಸರಿ ಮಿಶ್ರಿತ ಅನ್ನ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಮುಖ ಆಹಾರವಾಗಿದೆ. ಕೇಸರಿಯನ್ನು ಹೆಚ್ಚಾಗಿ ಮಿಶ್ರ ಮಾಡಿರುವ ಅನ್ನ ಇದರ ಜೊತೆಗೆ ಸ್ವಲ್ಪ ತರಕಾರಿಗಳು ತುಂಬಾ ಒಳ್ಳೆಯ ಆಹಾರ ಪದಾರ್ಥವಾಗಿ.ಇದನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಕೃಷ್ಣನಿಗೆ ಇದನ್ನು ಅರ್ಪಿಸಬೇಕು.ಇದೊಂದು ಒಳ್ಳೆಯ ಆಹಾರ ಪದಾರ್ಥವಾಗಿದೆ.
5.ಕೀರ್.
ಸಿಹಿಯಾದ,ಸ್ವಾಧ ಭರಿತ ಆಹಾರ ಪದಾರ್ಥ ಕೀರ್.ಇದನ್ನು ತುಪ್ಪ, ಬೆಲ್ಲ, ದ್ರಾಕ್ಷಿ,ಗೋಡಂಭಿ, ಶಾವಿಗೆ ಹಾಲು ಹಾಕಿ ಮಾಡಿದ ಕೀರ್ ಶ್ರೀ ಕೃಷ್ಣನನ್ನು ಸಂತೋಷವಾಗಿಸುವಂತೆ ಮಾಡುತ್ತದೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಇವೆಲ್ಲಾ ಆಹಾರ ಪದಾರ್ಥಗಳನ್ನು ತಪ್ಪದೆ ಅರ್ಪಿಸಿ ಶ್ರೀ ಕೃಷ್ಣ ಪರಮಾತ್ಮನ ಕೃಪೆಗೆ ಪಾತ್ರರಾಗಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
