fbpx
ಸಮಾಚಾರ

ಆಮೆ ಉಂಗುರವನ್ನು ಧರಿಸುವುದರಿಂದ ಆಗುವ ವಿಶೇಷ ಪ್ರಯೋಜನಗಳು.

ಆಮೆಯ ಉಂಗುರ ಹಾಕೊಂಡ್ರೆ ಎಷ್ಟೆಲ್ಲಾ ಅದೃಷ್ಟ ಮತ್ತು ಲಾಭಗಳು ಇವೆ ಅಂತ ತಿಳ್ಕೊಂಡ್ಮೇಲೆ ನೀವು ಹಾಕೊಳ್ತೀರಾ

ಆಮೆಯ ಪ್ರತಿಮೆಯನ್ನು ಲಕ್ಷ್ಮೀ ನಾರಾಯಣನ ಚಿಹ್ನೆಯಾಗಿ ಹಿಂದೂಗಳು ಭಾವಿಸುತ್ತಾರೆ. ಆಮೆ ಎಂದರೆ ವಿಷ್ಣು ಭಗವಂತನ ಕೂರ್ಮ ಅವತಾರ, ಅಂದರೆ ಕೂರ್ಮ ಇದು ಯಾವಾಗಲೂ ತುಂಬಿದ ಆಯಸ್ಸನ್ನು ಮತ್ತು ದೈವತ್ವದ ಸಂಕೇತವನ್ನು ಪ್ರತಿನಿಧಿಸುತ್ತದೆ. ಶ್ರೀ ಹರಿಯು ಬಹಳ ಮುಖ್ಯವಾದ ದಶ ಅವತಾರಗಳಲ್ಲಿ ಕೂರ್ಮ ಅವತಾರವೂ ಸಹ ಒಂದಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ.

 

ಆದ್ದರಿಂದಲೇ ದೇವಸ್ಥಾನದಲ್ಲಿಯೂ ಸಹ ಆಮೆಯ ಪ್ರತಿಮೆಯನ್ನು ಹೆಚ್ಚಾಗಿ ನಾವು ನೋಡಬಹುದು. ಆಮೆಯ ಉಂಗುರವನ್ನು ಧರಿಸುವುದರಿಂದ ನಮಗೆ ಧನಪ್ರಾಪ್ತಿ, ಅದೃಷ್ಟ ಸಿಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಆಮೆ ಸುದೀರ್ಘವಾಗಿ ಹೇಗೆ ಜೀವಿಸುತ್ತದೆಯೋ ಹಾಗೆಯೇ ಇದರ ಉಂಗುರ ಅಥವಾ ಹಾರವನ್ನು ಧರಿಸಿದರೆ ನಮಗೂ ಸಹ ಆಯುಷ್ಯ ವೃದ್ಧಿಯಾಗುತ್ತದೆ ಎಂದು ನಂಬುತ್ತಾರೆ.

ಮುಖ್ಯವಾಗಿ ಯಾರ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಾಗಿ ಇರುತ್ತದೆಯೋ , ಅಂತಹವರಿಗೆ ಕೆಲಸದಲ್ಲಿ ತುಂಬಾ ಅಡೆತಡೆಗಳು ಹೆಚ್ಚಾಗಿ ಬರುತ್ತಾ ಇರುತ್ತವೆ. ಅಂತಹವರು ಈ ಆಮೆಯ ಉಂಗುರ ಅಥವಾ ಹಾರವನ್ನು ಧರಿಸಿದರೆ ತುಂಬಾ ಒಳ್ಳೆಯದು.

 

ಹಾಗೆಯೇ ನವ ರತ್ನಗಳಿಂದ ಮಾಡಿದ ಆಮೆಯನ್ನು ಧರಿಸಿದರೆ ಮತ್ತಷ್ಟು ಅಭಿವೃದ್ಧಿಯನ್ನು ಕಾಣಬಹುದು . ಆದರೆ ನವರತ್ನದ ಆಮೆಯನ್ನು ಉಂಗುರವಾಗಿ ಧರಿಸಬೇಕು ಎನ್ನುವವರು ಅವರ ಜಾತಕವನ್ನು ಸಂಕ್ಷಿಪ್ತವಾಗಿ ನೋಡಿಕೊಂಡು , ನಂತರ ಧರಿಸಿದರೆ ಇನ್ನೂ ಒಳ್ಳೆಯದು.

ಅನೇಕ ಜನರು ಇಂದಿಗೂ ಉಂಗುರ ಧರಿಸುತ್ತಾರೆ. ಅದರಲ್ಲಿ ಕೆಲವರು ಆಮೆಯ ಆಕಾರದ ಉಂಗುರ ಧರಿಸಿದ್ದಾರೆ. ಈಗಂತೂ ಇದೊಂದು ಫ್ಯಾಷನ್ ಆಗಿಬಿಟ್ಟಿದೆ. ಈ ಆಮೆಯ ಉಂಗುರವನ್ನು ಧರಿಸಿದಾಗ, ಆಮೆಯ ತಲೆಯು ನಿಮ್ಮ ಬದಿಯಲ್ಲಿರಬೇಕು. ವಾಸ್ತವವಾಗಿ ಆಮೆಯ ಉಂಗುರವನ್ನು ವಾಸ್ತು ಶಾಸ್ತ್ರದಲ್ಲಿ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಉಂಗುರ ವ್ಯಕ್ತಿಯ ಜೀವನದ ಅನೇಕ ದೋಷಗಳನ್ನು ಶಾಂತಗೊಳಿಸುವ ಕೆಲಸ ಮಾಡುತ್ತದೆ .

 

ಈ ಉಂಗುರವನ್ನು ಧರಿಸುವುದರಿಂದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಾಳ್ಮೆ ಮತ್ತು ಧೈರ್ಯ ಹೆಚ್ಚುತ್ತದೆ. ಹಾಗೆಯೇ ಇದು ಯಶಸ್ಸಿಗೆ ಕಾರಣವಾಗುತ್ತದೆ. ವಾಸ್ತವವಾಗಿ ಗ್ರಂಥಗಳ ಪ್ರಕಾರ ನೀರಿನಲ್ಲಿ ವಾಸಿಸುವ ಆಮೆ ಸಕಾರಾತ್ಮಕತೆ ಮತ್ತು ಪ್ರಗತಿಯ ಸಂಕೇತವೆಂದು ಹೇಳಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top