ಸಿಹಿ ತಿನ್ನಲು ಯಾರಿಗೆ ಆಸೆಯಿರುವುದಿಲ್ಲ?! ಆದರೆ ಮಧುಮೇಹ ಬಂದೀತೆಂದು ಸಕ್ಕರೆಯಿಂದ ತಯಾರು ಮಾಡಿದ ಯಾವುದೇ ಪದಾರ್ಥಗಳನ್ನು ತಿನ್ನಲು ಭಯವಾಗುತ್ತದೆ. ಇಲ್ಲಿವೆ ಸಕ್ಕರೆ ಬಳಸದೇ ಸಿಹಿಯಾಗಿಸುವ 5 ಸಿಹಿ ಪದಾರ್ಥಗಳು. ಆದ್ದರಿಂದ ಇನ್ನು ಮುಂದೆ ಸಿಹಿ ಮಾಡುವಾಗ ಯಾವುದೇ ಭಯವಿಲ್ಲದೇ ಇವುಗಳನ್ನು ಯಥೇಚ್ಛವಾಗಿ ಬಳಸಿ.
ಜೇನು:
ಜೇನುತುಪ್ಪ ಸಕ್ಕರೆಗೆ ಸರಿಸಮಾನಾದ ಸಿಹಿ ಕೊಡುವಂತಹದು. ಜೇನಿನಲ್ಲಿ ನೈಸರ್ಗಿಕ ಸಿಹಿಯಿದ್ದು ಇದು ಮೂಲವಾಗಿ ಆಲ್ಕಲೈನ್ ಪದಾರ್ಥವಾಗಿರುವುದರಿಂದ ಅತಿ ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತ ಸಂಚಲನವನ್ನು ಸುಲಭಗೊಳಿಸುತ್ತದೆ.
ಬೆಲ್ಲ:
“ಬಲ್ಲವನೇ ಬಲ್ಲ ಬೆಲ್ಲದ ರುಚಿಯ”. ಬೆಲ್ಲವು ಸಕ್ಕರೆಗಿಂತ ರುಚಿ. ಸಿಹಿಯಡಿಗೆಗಳಿಗೆ ಬೆಲ್ಲ ಬಳಸಿವುದರಿಂದ ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
ಖರ್ಜೂರ:
ಖರ್ಜೂರ ಸಹ ಸಿಹಿಯಾದ ಸಕ್ಕರೆಗೆ ಪರಿಣಾಮಕಾರಿಯಾದ ಬದಲೀ. ಇದು ದೇಹಕ್ಕೆ ಬೇಕಾದಂತಹ ಖನಿಜಗಳು ಮತ್ತು ಕಬ್ಬಿಣದ ಅಂಶಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.
ಅಂಜುರ:
ಅಂಜುರದ ಗುಣಗಳು ಖರ್ಜುರದಂತೆಯೇ ಇವೆ. ಅಂಜುರವೂ ಸಹ ಬಹಳ ಸಿಹಿ ಮತ್ತು ರುಚಿಯಾಗಿರುತ್ತದೆ.
ಹಣ್ಣುಗಳು:
ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯ ಇವೆಲ್ಲಾ ಸಿಹಿ ಹಣ್ಣುಗಳು. ಇವುಗಳ ಸಲಾಡ್ ಮಾಡಿ ತಿನ್ನುವುದರಿಂದ ಸಿಹಿ ತಿನ್ನಬೇಕು ಎಂಬ ಆಸೆಯೂ ತೀರುತ್ತದೆ ಅಲ್ಲದೆ ಹಣ್ಣುಗಳಲ್ಲಿರುವ ವಿಟಮಿನ್ನುಗಳು, ಖನಿಜಾಂಶಗಳು ಎಲ್ಲವೂ ದೇಹಕ್ಕೆ ಸಿಗುತ್ತವೆ. ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನುವುದರಿಂದ ತೂಕ ಕೂಡ ಕಡಿಮೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
