fbpx

ಈ ಬುಧವಾರ ‘ಮಾಂಸ’ ಸಿಗಲ್ಲ: ಮಾಂಸ ಮಾರಾಟ ಮತ್ತು ಪ್ರಾಣಿವಧೆ ನಿಷೇಧಿಸಿದ ಸರ್ಕಾರ

ಕೊರೋನಾ ಕಾಟದಿಂದ ನಾನಾ ನಿಯಮ, ನಿರ್ಬಂದಗಳ ನಡುವೆ ಕಳೆದ ಎರಡು ವರ್ಷ ಗಣೇಶನ ಹಬ್ಬ ನಡೆದಿತ್ತು. ಆದರೆ ಈ ಸಲ ಯಾವುದೇ ನಿಯಮಗಳು ಇಲ್ಲದೆ ಅದ್ದೂರಿಯಾಗಿ ಗಣೇಶೋತ್ಸವ ಮಾಡಲು ಭಕ್ತರು ಕಾತರರಾಗಿದ್ದಾರೆ. ಇನ್ನೇನು ದಿನದೊಪ್ಪತ್ತಿಗೆ ಪ್ರತಿ ಊರಿಗೂ ಗಣೇಶ ಆಗಮಿಸಲಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

 

 

ಈ ಮದ್ಯೆ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು ಗಣೇಶನ ಹಬ್ಬದ ದಿನ ಅಂದರೆ ಆಗಸ್ಚ್ 31ರಂದು “ಗಣೇಶ ಚತುರ್ಥಿ” ದಿನದ ಪ್ರಯುಕ್ತ ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ಮಾಡುವಂತಿಲ್ಲ ಎಂದು ಆದೇಶ ಮಾಡಲಾಗಿದೆ. ಈ ಮೂಲಕ ಈ ಬುಧವಾರ(ಆಗಸ್ಟ್ 31) ಮಾಂಸ ಮಾರಾಟ ಮತ್ತು ಪ್ರಾಣಿವಧೆಯನ್ನು ನಿಷೇದ ಮಾಡಿದೆ.

ಈ ಬಗ್ಗೆ ಬಿಬಿಎಂಪಿಯ ಪಶುಪಾಲನೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ದಿನಾಂಕ: 31-08-2022 ಬುಧವಾರದಂದು ” ಗಣೇಶ ಚತುರ್ಥಿ” ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top